ನೋಡಿ.. ಇವರೇನೇ ಮಾಡಲಿ.. ದುಡ್ಡಿನ ವಾಸನೆ ಮಾತ್ರ ಮೂಗಿಗೆ ಬಡಿಯುತ್ತೆ. ನೂರು ಸಿಸಿಕಿಂತ ಕಡಿಮೆ ಇರುವ ಗಾಡಿಗಳಲ್ಲಿ ಡಬಲ್ ಸವಾರಿ ಬೇಡವೇ ಬೇಡ ಅನ್ನುವ ಹಿಂದೆ ಒಂದು ದೊಡ್ಡ ಕಿಕ್ ಬ್ಯಾಕ್ ಇದ್ದೇ ಇರುತ್ತೆ. ಇವರು ಎರಡು ವಾರ ಮಾತ್ರ ಹೆಲ್ಮೆಟ್ ಕಡ್ಡಾಯ ಮಾಡಲಿಲ್ಲವೇ!?? ಹಾಗೇ...
ಸರಕಾರಿ ಗೋಧಾಮುಗಳಲ್ಲಿ ಟನ್'ಗಟ್ಟಲೇ ಗೋಧಿ ಕೊಳೆತು ಬಿದ್ದಿದೆ. ಯಾವ ಪಡಿತರ ಚೀಟಿಗೂ ಇವರು ಈ ಹಿಂದೆ ಗೋಧಿ ಕೊಟ್ಟಿಲ್ಲ. (ಯಾವ ಭಾಗ್ಯದ ಸ್ಕೀಮ್ ಅಲ್ಲೂ ಜನರಿಗೆ ಗೋಧಿ ಸಿಕ್ಕಿಲ್ಲ). ಹಾಗಾದರೆ ಪೋಗಸ್ತಾಗಿ ಶೇಖರಣೆ ಮಾಡಿದ್ದೇಕೇ!?? ಅದನ್ನು ಕೊಳೆಯೊದಕ್ಕೆ ಬಿಟ್ಟಿದ್ದೇಕೇ!?
ಒಂದು ಐಟಿ ರೈಡ್ ಆದರೆ ಬಾಯಿ ಬಾಯಿ ಬಡೆದು ಕೊಳ್ಳುವ ಈ 'ಸದಾ ಸಿದ್ಧ ಸರಕಾರ'ದ ನಾಯಕರ ಆರ್ತನಾದವ ನೀವು ಕೇಳಿಲ್ಲವೇ??
ಜಾತಿ ನೋಡಿ ಮೊಟ್ಟೆ ಕೊಡುವ, ಬಸ್ ಪಾಸ್ ಕೊಡುವ, ಲ್ಯಾಪ್ ಟಾಪ್ ಕೊಡುವ, ಗುಡ್ಡ ಹತ್ತುವ ಯುವಕರಿಗೆ 'ಟ್ರೇಕಿಂಗ್ ಕಿಟ್' ಕೊಡುವ, ಹಾಲು ಕರೆದು ಕೊಂಡು ಮಾರಲು ಬರುವ ರೈತರ ಜಾತಿ ನೋಡುವ, ಸರಕಾರಕ್ಕೊಂದು ಧಿಕ್ಕಾರ!!!!!
No comments:
Post a Comment