ನರಮನುಷ್ಯ ಅತೀ ಭಯ ಪಡುವ, ಅಧೀರನಾಗುವ, ಪತುರುಗುಟ್ಟಿಹೋಗುವ ಸಮಯ ಅಂದರೆ ಅದು ಸಾವು.. ಅದು ಅವನದೇ ಸಾವಲ್ಲ.. ಅವನದೇ ಸಾವನ್ನ ಸ್ವತಃ ಅವನು ಊಹೆ ಕೂಡ ಮಾಡಿರುವುದಿಲ್ಲ. ಅಲ್ಲಿ ಜೊತೆಗೇ ಸಾಯುವ ಇನ್ನೊಂದು ಅಂದರೆ, ಆ ದೇಹವನ್ನ, ಜೀವವನ್ನ ನಂಬಿರುವ, ಪ್ರೀತಿಸಿರುವ, ಆಧಾರವಾಗಿ ಇಟ್ಟುಕೊಂಡಿರುವ ಇನ್ನೊಂದು ಜೀವ ಹಾಗೂ ಜೀವಗಳು.
ತಂದೆ ಸತ್ತರೆ ಹೆಂಡತಿ ಮತ್ತು ಮಕ್ಕಳು! ತಾಯಿ ಸತ್ತರೆ, ಮಕ್ಕಳು ಮತ್ತು ಗಂಡ! ಮಕ್ಕಳು ಸತ್ತರೆ ಅಪ್ಪ ಮತ್ತು ಅಮ್ಮ! ಹೀಗೆಯೇ.. ಪಟ್ಟಿ ಮಾಡುತ್ತಾ ಹೋದರೆ ಸಾವು ಎಲ್ಲರನ್ನೂ ಕಾಡುತ್ತದೆ. ಸಾವನ್ನು ನಮ್ಮ ಸ್ಮೃತಿಪಟಲದಿಂದ ದೂರ ಮಾಡುವ ಶಕ್ತಿ ಇರುವುದು ಸಮಯಕ್ಕೊಂದೆ.
ಆ ಸಾವನ್ನ ಕುಟುಂಬ, ದುಡ್ಡು, ಅಧಿಕಾರ, ಜನಬೆಂಬಲ.. ಊಹೂಂ.. ಯಾವುದರರಿಂದಲೂ ತಡೆಯಲು ಅಸಾಧ್ಯ. ಯಾವ ರಾಜನನ್ನೂ, ಯಾವ ಧಣಿಯನ್ನೂ ಸಾವು ಬಿಟ್ಟಿಲ್ಲ.
ನಾವು ನಂಬಿರುವ, ಪ್ರೀತಿಸಿರುವ ಎಲ್ಲರ ಸಾವಿಗೂ ನಾವು ಮುಂಚೆಯೇ ಅಣಿಯಾಗಿರಬೇಕು. ನಮ್ಮ ಸಾವನ್ನೂ ಕೂಡ ನಮ್ಮನ್ನು ನಂಬಿರುವವರು ನೋಡಿ ಕೈಕಟ್ಟಿ ಕೂರದ ಹಾಗೇ ನಾವು ಬೆಳೆದಿರಬೇಕು.
ನಮ್ಮ ಎರಡೂ ಕೈಯಿಂದ ಸಾವನ್ನ ಸ್ವಾಗತಿಸುವ 'ಶಕ್ತಿ' ಎಲ್ಲರಿಗೂ ಇರಲೇಬೇಕು...
No comments:
Post a Comment