Wednesday, October 18, 2017

ಸಿಂಗೀತಂ ಶ್ರೀನಿವಾಸ್ ರಾವ್!!!

೧೯೭೦ ರಲ್ಲಿ ಅನಂತಮೂರ್ತಿ ತಮ್ಮದೇ ಒಂದು ಕಾದಂಬರಿಯನ್ನ ಸಿನಿಮಾ ಮಾಡಲೇಬೇಕು ಅಂತ ಅನಿಸಿದಾಗ ಪಟ್ಟಾಭಿರಾಮ್ ಒಂದು ಶ್ರೇಷ್ಠ ಅಯ್ಕೆ ಅಂತ ಅನ್ನಿಸಿತ್ತೋ, ಇಲ್ಲವೋ ಗೊತ್ತಿಲ್ಲ. "ಸಂಸ್ಕಾರ" ಅನ್ನುವ ಟಿಪಿಕಲ್ ಸಬ್ಜೆಕ್ಟ್ ಕೂಡ ಸಂಸ್ಕಾರವಂತರಿಂದಲೇ ಆಗಬೇಕು ಅನ್ನೊದು ಒಳಗುಟ್ಟು. ಚಿತ್ರಕಥೆಯ ಕಾರ್ಡ್ ಅಲ್ಲಿ ಕಾರ್ನಾಡರ ಹೆಸರು ಹೇಗೆ ಬಂತು ಅನ್ನೊದು ನನಗಿನ್ನೂ ಅನುಮಾನ. ಸ್ವತಃ ಮೂರ್ತಿಗೆ ಈ ವಿಷಯದಲ್ಲಿ, ತಮ್ಮ ಮೇಲೆ ತಮಗೇ ನಂಬಿಕೆ ಇರಲಿಲ್ಲ. ಅಲ್ಲಿ ಪಟ್ಟಾಭಿರಾಮ್ ಒಂದು ನೆಪ ಅಷ್ಟೆ. ಹಿಂದೆ ಇದ್ದಿದ್ದು ಸಿಂಗೀತಂ ಶ್ರೀನಿವಾಸ್ ರಾವ್.

ಇವತ್ತಿಗೂ ನಾನು ಇಷ್ಟಾತೀ ಇಷ್ಟ ಪಡುವ ಚಿತ್ರಕರ್ಮಿ ಈ ರಾವ್. ಅವರು ಒಬ್ಬ ಎಕ್ಸ್'ಪರಿಮೆಂಟಲ್ ವ್ಯಕ್ತಿ. ಆಂಧ್ರದ ಈ ವ್ಯಕ್ತಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಅವರ ರಾಜ್ಯದಲ್ಲಿ ಅದೆಷ್ಟೋ ಬಿರುದು, ಪ್ರಶಸ್ತಿ, ಪೋಷಾಕು ಸಿಕ್ಕರೂ ಕನ್ನಡಿಗರ ಚಪ್ಪಾಳೆ ಎಂದರೆ ಅವರಿಗೆ ದೀಪಾವಳಿಯ ಗುಲಾಬ್ ಜಾಮೂನು!! (ಈಗಿನ ರಾಜಮೌಳಿ ಥರ☺️). ಡಾ:ರಾಜಕುಮಾರ್ ಎಂಬ ಮೇರು ನಟನನ್ನ ಅವರು ಕಂಡ ಹಾಗೇ ಬಹುಶಃ ಯಾರೂ ಊಹೆ ಕೂಡ ಮಾಡಿಲ್ಲ ಅನ್ನಿಸುತ್ತೆ. ಹಾಲುಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರಗಳನ್ನ ಎಂದಿಗೂ ಔಟ್'ಡೇಟ್ ಕೂಡ ಆಗದ ಹಾಗೇ ನಿರ್ಮಿಸಿಬಿಟ್ಟರು.

ಸಿಂಗೀತಂ, ಎಂದಿಗೂ ಪೌರಾಣಿಕ ಚಿತ್ರಗಳಿಗೆ ಅಂಟಿಕೊಂಡವರಲ್ಲ. ಏನಿದ್ದರೂ ಪಕ್ಕಾ ಪ್ರಾಕ್ಟಿಕಲ್ ಸ್ಟೋರಿ. ಉತ್ಮಮ ಸಂಭಾಷಣೆಕಾರರಾಗಿಯೂ "ಪುಷ್ಪಕ ವಿಮಾನ" ಎಂಬ ಮೂಕಿ ಚಿತ್ರ ನಿರ್ಮಿಸಿ ಭೇಷ್ ಅನಿಸಿಕೊಂಡವರು. ರಾಜಕುಮಾರ್ ಜೊತೆಗೆ ಅವರ ಮೂರೂ ಮಕ್ಕಳ ಚಿತ್ರ ನಿರ್ದೇಶಿಸಿದ ಏಕೈಕ ವ್ಯಕ್ತಿ ಎಂದರೆ ಸಿಂಗೀತಂ ಶ್ರೀನಿವಾಸ್ ರಾವ್.

ಅಭೇರಿ, ಸಿಂಧು ಭೈರವಿ, ಕಾಫಿ, ಕಲ್ಯಾಣಿ, ಪಹಾಡ್ ರಾಗಗಳನ್ನು ಮನೆದೇವರಂತೆ ಪೂಜಿಸುತ್ತಿದ್ದ ಸಾಲೂರು ರಾಜೇಶ್ವರರಾವ್ ಅವರ ಅಭಿಮಾನಿ ಆಗಿದ್ದಕ್ಕೋ ಏನೋ, "ಇನ್ನೂ ಹತ್ತಿರ, ಹತ್ತಿರ ಬರುವೆಯಾ??" ಅಂತ ರೊಮ್ಯಾಂಟಿಕ್ ಸ್ಟೈಲ್ ಅಲ್ಲಿ ಹಾಡುಗಳನ್ನೂ ರಚಿಸುತ್ತಿದ್ದ ಭೂಪ! ಅವರನ್ನು ಇಷ್ಟಪಡಲು ಇನ್ನೂ ಒಂದು ಕಾರಣವಿದೆ. ನನ್ನ ಫೇವರಿಟ್ ಅಂದಕಾಲತ್ತಿಲ್ ಮಾಧವಿಯನ್ನ (😍) ಭಾಗ್ಯದ ಲಕ್ಷ್ಮಿ ಬಾರಮ್ಮ ಸಿನಿಮಾದಲ್ಲಿ ದಂತದ ಗೊಂಬೆಯಂತೆ ತೋರಿಸಿರುವ ಪರಿ!!

ಯಾವ ಕವಿಯೂ ಬರೆಯಲಾರ...
ಒಲವಿನಿಂದ...
ಕಣ್ಣೋಟದಿಂದ...
ಹೃದಯದಲ್ಲಿ ನೀನು ಬರೆದ ಈ ಪ್ರೇಮಗೀತೆಯ...
ಯಾವ ಕವಿಯೂ ಬರೆಯಲಾರ...!!!

No comments:

Post a Comment