Friday, September 13, 2013

ಯಾಕೋ, ನಮ್ಮಣ್ಣ ನೆನಪಾದ...

ಎಲ್ಲೋ ಜೋಗಪ್ಪ ನಿನ್ನ ಅರಮನೆ?
ಮರದೊಳಡಗಿದ ಬೆಂಕಿಯಂತೆ
ಎಲ್ಲೋ ಅಡಗಿದೆ ಬೇಸರ
ಏನೋ ತೀಡಲು ಏನೋ ಕಾಡಲು
ಹೊತ್ತಿ ಉರಿವುದು ಕಾತರ..!

ಅಡಿಗರ ಕವಿತೆಯನ್ನು ಎದೆಗಿಳಿಸಿಕೊಂಡು ಬೆರಳಲ್ಲಿ ಸಿಗರೇಟು ತುದಿಯ ನಿಗಿನಿಗಿ ಕೆಂಡ ಸವರುತ್ತಾ ಕುಳಿತಿದ್ದೆ. ಈ ಘಟನೆ ನಡೆದಿದ್ದು ಈಗ್ಗೆ ಹದಿನೇಳು ವರ್ಷಗಳ ಹಿಂದೆ.

'ಏನಾಗಿದೆ ನಿಂಗೆ?' ಆಕೆ ನನ್ನೆಡೆಗೆ ಕಾಫಿ ಸರಿಸುತ್ತಾ ಕೇಳಿದಳು. ಉತ್ತರಿಸಬೇಕೆನಿಸಲಿಲ್ಲ. ಆಕೆ ತನ್ನ ಹರಿದು ಹೋದ ತಾಳಿಸರಕ್ಕೆ ಹೊಸ ಪಿನ್ನು ಹಾಕಿ ಸರಿಪಡಿಸಿಕೊಳ್ಳತೊಡಗಿದಳು. ಅದನ್ನಾಕೆ ಕಟ್ಟಿಸಿಕೊಂಡು ಆವತ್ತಿಗೆ ಹದಿನೇಳು ವರ್ಷಗಳಾಗಿದ್ದವು. ಅದು ಹರಿದಿದೆ, ತುಂಡಾಗಿದೆ, ಸವೆದಿದೆ, ಅಕ್ಕಸಾಲಿಗರ ಮನೆಗೆ ಹೋಗಿ ಬಂದಿದೆ, ಹಠಾತ್ತನೆ ಕಳೆದು ಹೋಗಿ ಧಾವಂತ ಹೆಚ್ಚಿಸಿದೆ, ಬಚ್ಚಲು ಮನೆಯ ಗೂಡಿನಲ್ಲಿ ಪ್ರತ್ಯಕ್ಷವಾಗಿ ನೆಮ್ಮದಿ ತಂದಿದೆ.

ಎರಡು ಬಂಗಾರದ ಬಟ್ಟಿನ, ಕರಿಮಣಿ ಸರದ ತುದಿಯ ತಾಳಿ!

ಅದನ್ನು ಕಟ್ಟಿದ ಮನುಷ್ಯನನ್ನು ನೋಡಿಕೊಂಡಷ್ಟು ಚೆನ್ನಾಗಿ, ಆಕೆ ತಾಳಿಯನ್ನು ನೋಡಿಕೊಂಡಿಲ್ಲ. ಅದಕ್ಕೆ ಬಂಗಾರದ ಎಳೆ ಇರಲಿಲ್ಲವೆಂಬ ಕಾರಣವೋ ಮತ್ತೇನು ಅಸಡ್ಡೆಯೋ? ತಾಳಿಯೆಂದರೆ ಆಕೆಗೆ ಅಂಥ ಮಮಕಾರವೇನೋ ಇದ್ದಂತಿಲ್ಲ. ಬಳೆ, ಓಲೆ, ಉಂಗುರಗಳಾದರೂ ಅಷ್ಟೆ. ಈ ಮೂವತ್ತ್ನಾಲ್ಕು ವರ್ಷಗಳಲ್ಲಿ ಆಕೆ ಅಂಥ ಮುಚ್ಚಟೆಪಟ್ಟು ಧರಿಸಿದ್ದು ನಾನು ನೋಡಿಲ್ಲ. ಆಕೆಯ ಕಾಲುಂಗುರ ಯಾವಾಗ ಮತ್ತು ಎಲ್ಲಿ ಕಳೆದು ಹೋಯಿತೋ, ಬಹುಶಃ ಆಕೆಗೂ ನೆನಪಿರಲಿಕ್ಕಿಲ್ಲ.

''ಇವತ್ತು ಆಫೀಸಿಗೆ ಹೋಗೋ ವಿಚಾರ ಇಲ್ವಾ ನಿಂಗೆ?'' ಅಂದಳು.

ಉತ್ತರಿಸಲಿಲ್ಲ. 'ನೀನು' ಅಂತಾಳೆ. ಮಕ್ಕಳು ಅಥವಾ ಮನೆಗೆ ಬಂದವರು ಎದುರಿಗಿದ್ದರೆ 'ನೀವು' ಅಂತಾಳೆ. ಈ ಏಕವಚನ, ಬಹುವಚನ, ಹಿತವಚನ ಇತ್ಯಾದಿಗಳೆಲ್ಲ ಮೂವತ್ತ್ನಾಲ್ಕು ವರ್ಷಗಳ ವನವಾಸದ ಮೌನದಲ್ಲಿ ಅರ್ಥ ಕಳೆದುಕೊಂಡಿವೆ. ಮೊದಲು ನಮ್ಮಿಬ್ಬರ ನಡುವೆ ಉರ್ದು ಇತ್ತು. ಈಗ ಮಕ್ಕಳಿದ್ದಾರೆ.

ಲಲಿತೆಯ ಬಗ್ಗೆ ಅಟ್‌ಲೀಸ್ಟ್ ಈ 'ಖಾಸ್‌ಬಾತ್‌' ಅಂಕಣದಲ್ಲಿ ಯಾವತ್ತೂ ಬರೆಯಬಾರದು ಅಂದುಕೊಂಡಿದ್ದೆ. ನಿನ್ನ ಬಗ್ಗೆ, ಗೆಳೆಯರ ಬಗ್ಗೆ, ಆಗ ತಾಯಿಯ ಬಗ್ಗೆ ಅಷ್ಟೊಂದು ಬರ‍್ಕೋತಿಯಾ. ಹೆಂಡತಿಯ ಬಗ್ಗೆ ಯಾಕೆ ಬರೆಯಲ್ಲ? ಅಂತ ಕೇಳಿದವರಿದ್ದಾರೆ. ಮುಂದೆ ಯಾವತ್ತಾದರೂ ನನ್ನ ಆತ್ಮವೃತ್ತಾಂತವೆಂಬ ಅತಿ ಭಯಾನಕ ಪುಸ್ತಕವನ್ನು ನಾನು ಬರೆದದ್ದೇ ಆದರೆ.. ಅದರಲ್ಲೊಂದು ತಣ್ಣನೆಯ, ಮಧುರವಾದ, ಆಪ್ಯಾಯತೆಯ ಅಧ್ಯಾಯವಿರುತ್ತದೆ. ಅದರ ಹೆಸರು ಲಲಿತೆ! ಒಂದು ಭೂಮಿ ತೂಕದ ವ್ಯಕ್ತಿತ್ವ ನನ್ನನ್ನು ಸಹಿಸಿಕೊಂಡಿದೆ, ಭರಿಸಿಕೊಂಡಿದೆ, ಆವರಿಸಿಕೊಂಡಿದೆ- ಅದರ ಹೆಸರು ಲಲಿತೆ!

ಅವತ್ತು ರಾತ್ರಿ ನಡೆದದ್ದನ್ನು ನಾನು ನಿಮಗೆ ಹೇಳಬೇಕು. ನಾನು ಪ್ರೆಸ್ ಕ್ಲಬ್ಬಿನಲ್ಲಿ ಕುಳಿತು ಆರನೇ ಲಾರ್ಜು ಕುಡಿಯುತ್ತಿದ್ದೆ. ಕೆಲವೇ ಗಂಟೆಗಳಿಗೆ ಮುಂಚೆ ಸುಮಾರು ಹತ್ತು ಸಾವಿರ ರುಪಾಯಿ ಸಂಬಳದ ನೌಕರಿಗೆ ಗೋಲಿ ಹೊಡೆದು ಬಂದು ಕುಳಿತಿದ್ದೆ. ಯಥಾಪ್ರಕಾರ unemployment ಎಂಬ ರಿಟೈರ್‌ಮೆಂಟ್ ಇಲ್ಲದ ಹುದ್ದೆ. ಮನಸ್ಸು ಕಳವಳಗೊಂಡಿತ್ತು. ಬೆಂಗಳೂರಿನಲ್ಲಿ ಉಳಿಯಲು ಜಾಗೆಯಿರಲಿಲ್ಲ. ಕೈಯ್ಯಲ್ಲಿ ಹಣವಿರಲಿಲ್ಲ. ಇದ್ದ ಚೂರು ಪಾರು ದುಡ್ಡು ಮುಗಿದು ಹೋಗುವ ಮುನ್ನ ಊರು ಸೇರಿಬಿಡಬೇಕು. ಮನಸ್ಸಿನ ಕಳವಳಗಳು ಶೃತಿ ಮೀರುವ ಮೊದಲೇ ಲಲಿತೆಯ ಸನ್ನಿಧಿ ತಲುಪಿಬಿಡಬೇಕು. ಸರಿ, ಏಳನೇ ಲಾರ್ಜು ಸಾಲ ಹೇಳಿ ಒಂದು gulpಗೇ ಮುಗಿಸಿ ಹುಬ್ಬಳ್ಳಿಯ ಬಸ್ಸು ಹತ್ತಿಬಿಟ್ಟೆ.

ರಾತ್ರಿ ನಾನು ಬೆಂಗಳೂರಿನಲ್ಲಿ ಬಸ್ಸು ಹತ್ತುತ್ತಿದ್ದ ಕ್ಷಣಗಳಲ್ಲೇ, ಅಲ್ಲಿ ಹುಬ್ಬಳ್ಳಿಯ ನನ್ನ ಹೆಂಚಿನ ಮನೆಯಲ್ಲಿ ಭಯಾನಕ ಘಟನೆಯೊಂದು ಸಂಭವಿಸಿರಬಹುದೆಂಬ ಸಣ್ಣ ಗುಮಾನಿಯೂ ನನಗಿರಲಿಲ್ಲ. ಬೆಳಗಿನ ಜಾವ ನಾನು ಮನೆಯ ಬಾಗಿಲು ತಟ್ಟಿದಾಗ ಮನೆಯೊಳಗೆ ದಿಗಿಲು ಹುಟ್ಟಿಸುವಂತಹ ಮೌನವಿತ್ತು. ಯಾವತ್ತೂ ಹಾಗಾಗಿರಲಿಲ್ಲ. ಬಾಗಿಲು ತಟ್ಟುವ ಅವಕಾಶವನ್ನೇ ಕೊಟ್ಟವಳಲ್ಲ ಲಲಿತೆ. ಹೆಜ್ಜೆ ಸಪ್ಪಳವೇ ಸಾಕು. ಮೊದಲ ಮೆಟ್ಟಿಲು ಹತ್ತುವ ಹೊತ್ತಿಗೇ ಎದ್ದು ಬಂದಿರುತ್ತಿದ್ದಳು. ಆದರೆ ಅವತ್ತು ಇಡೀ ಐದು ನಿಮಿಷ!

ಆಕೆ ಬಂದು ವರಾಂಡದ ದೀಪ ಹಾಕಿ ಬಾಗಿಲು ತೆರೆದಾಗ, ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಅಷ್ಟೊಂದು ಭಯದಿಂದ, ಆತಂಕದಿಂದ ಚೀತ್ಕರಿಸಿದ್ದೆ. ಆಕೆಯ ಮುಖ ಒಡೆದು ಹೋಗಿತ್ತು. ಮೇಲಿನ ತುಟಿ ಮೂರು ಭಾಗವಾಗಿತ್ತು. ಆರು ಹಲ್ಲು ಕಿತ್ತು ಹೋಗಿದ್ದವು. ಕುತ್ತಿಗೆ ಸುಟ್ಟು ಹೋಗಿತ್ತು. ನಾನು ಚಿಕ್ಕ ಹುಡುಗನಂತೆ ಅಳತೊಡಗಿದೆ. 'ಮಕ್ಕಳು ಗಾಬರಿಯಾಗ್ತಾರೆ... ಸುಮ್ನಿರು' ಎಂದು ಅತಿ ಕಷ್ಟದಿಂದ ಹೇಳಿ ಒಳಕ್ಕೆ ಕರೆದೊಯ್ದಳು. ಅಡುಗೆ ಮನೆಗೆ ಒಯ್ದು ಕುಕ್ಕರ್ ತೋರಿಸಿದಳು. ಅದು ಹಿಂದಿನ ರಾತ್ರಿ, ಅಲ್ಲಿ ನಾನು ಬಸ್ಸೇರುತ್ತಿದ್ದ ಹೊತ್ತಿನಲ್ಲೇ ಭಯಂಕರವಾಗಿ ಸಿಡಿದು ಬಿಟ್ಟಿತ್ತು. ಅಪಘಾತ, ಹೆಣ, ರಕ್ತಪಾತ, ಸಾವು... ಎಲ್ಲವನ್ನೂ ನೋಡಿದ ಮನುಷ್ಯ. ಸಣ್ಣ ಏಟಿಗೆ ಧೃತಿಗೆಡುವವನಲ್ಲ. ಅಂಥವನು ದಿಕ್ಕು ತೋಚದೆ ಕೂತು ಬಿಟ್ಟಿದ್ದೆ ನೋಡಿ! ನನಗೇ ಅಂಥದೊಂದು ಅಪಘಾತವಾಗಿದ್ದರೂ ನಾನಷ್ಟು ಹೆದರುತ್ತಿರಲಿಲ್ಲ.

ಅವಳ ಮುಖ destroy ಆಗಿ ಹೋಗಿತ್ತು. ಕುಕ್ಕರ್‌ನ ಸ್ಫೋಟ ಎಷ್ಟು ಭಯಾನಕವಾಗಿತ್ತೆಂದರೆ, ನಮ್ಮ ನೆರೆಹೊರೆಯವರು ಓಡಿ ಬಂದು ಮನೆಯಲ್ಲಿ ಬದುಕಿದ್ದವರನ್ನೆಲ್ಲ ಒಮ್ಮೆ ಎಣಿಸಿ confirm ಮಾಡಿಕೊಂಡಿದ್ದರು. ಅಡುಗೆ ಮನೆಯ false roof ಕಿತ್ತು ಹೋಗಿತ್ತು. ನನ್ನ ಲಲಿತೆ ನಿತ್ರಾಣಗೊಂಡು ಕುರ್ಚಿಗೊರಗಿ ಕುಳಿತಿದ್ದರೆ, ಚಿಕ್ಕ ಮಗಳು ಕಂಪಿಸುತ್ತಾ ನಡೆದುದನ್ನೆಲ್ಲ ವಿವರಿಸತೊಡಗಿದ್ದಳು. ಅವಳ ವಿವರಣೆಯೆಲ್ಲ ಮುಗಿದ ಮೇಲೆ ಲಲಿತೆ ಅಂದದ್ದೇನು ಗೊತ್ತೇ?

ತಕ್ಷಣ ಒಂದು ಕವಿತೆ ನೆನಪಾಯಿತು. ಯಾವುದೋ ದೇಶದ ಕವಿತೆಯದು. ಅದರ ಇಂಗ್ಲಿಷ್ ಅನುವಾದ ಓದಿದ್ದೆ. ಆಕೆ ಆರೇಳು ಮಕ್ಕಳ ತಾಯಿ. ಮನೆ ತುಂಬ ಬಡತನ. ಕಷ್ಟಪಟ್ಟು ಮಕ್ಕಳಿಗೆ ಅನ್ನ ಹೊಂಚುವಾಗ ಪರಮ ಕಾರ್ಕೋಟಕ ವಿಷದ ಚೇಳೊಂದು ಆಕೆಯನ್ನು ಕುಟುಕಿಬಿಡುತ್ತದೆ. ಒಂದೇ ನೋವು! ಮಂತ್ರವಾದಿ, ವೈದ್ಯ, ನಾಟಿ ಔಷಧಿಯವನು, ನೆರೆಹೊರೆಯವರು ಎಲ್ಲ ಬರುತ್ತಾರೆ. ಏನೆಲ್ಲ ಮಾಡುತ್ತಾರೆ. ಅಬ್ಬಾ, ಇಡೀ ಪದ್ಯದ ತುಂಬಾ ನೋವಿನದೇ ವರ್ಣನೆ. ಎಷ್ಟೋ ಹೊತ್ತಿನ ನಂತರ ವಿಷವೆಲ್ಲ ಇಳಿದು ನಿರುಮ್ಮಳಗೊಂಡ ಮೇಲೆ ಆಕೆ ಉದ್ಗರಿಸುತ್ತಾಳೆ 'ಸದ್ಯ, ಈ ಚೇಳು ಮಕ್ಕಳಿಗೆ ಕಚ್ಚಲಿಲ್ವಲ್ಲ!''

ಅವತ್ತು ಲಲಿತೆ ಅಂದದ್ದೂ ಅದನ್ನೇ. ಇಡೀ ಮೂವತ್ತ್ನಾಲ್ಕು ವರ್ಷದ ಒಡನಾಟದಲ್ಲಿ ಅನ್ನುತ್ತ ಬಂದಿರುವುದೂ ಅದನ್ನೇ. ಲೆಕ್ಕದ ಪ್ರಕಾರ ಮೂವತ್ತ್ನಾಲ್ಕು ವರ್ಷ. ಆದರೆ ಮೂವತ್ತೆಂಟು ವರ್ಷಗಳಾಗಿ ಹೋದವು. 1975ರ ಜನವರಿ ಮೊದಲ ದಿನ ನನಗವಳ ಪರಿಚಯವಾದದ್ದು. ಆದವಳ birthday ಕೂಡ. 'ಇಡೀ ಜಗತ್ತೇ ಆಚರಿಸುತ್ತಲ್ಲ ಮೇಡಂ?' ಅಂತ ತಮಾಷೆ ಮಾಡಿದ್ದೆ. ಅವಳೇ ನನ್ನ ಜಗತ್ತಾಗುತ್ತಾಳೆ ಅಂದುಕೊಂಡಿರಲಿಲ್ಲ. ನನ್ನ ವೈಫಲ್ಯ, ಸೋಲು, ಹತಾಶೆ, ನಿರಾಶೆ, ಕಳವಳಗಳಿಗೆಲ್ಲ ಸಾಕ್ಷಿಯಾಗಿ ನಿಂತವಳು. ಕಷ್ಟಗಳನ್ನೆಲ್ಲ 'ನಾನಿದ್ದೇನೆ ಅನುಭವಿಸು...' ಅಂದು ಜೊತೆಗೆ ಬಂದು ನಿಂತವಳು. ಎಲ್ಲ ಹೆಂಡತಿಯರೂ ಹಾಗೇನೇ. ಅದರಲ್ಲೇನಿದೆ ಗ್ರೇಟ್‌ನೆಸ್ ಅಂತೀರೇನೋ. ಆದರೆ ಎಲ್ಲ ಗಂಡಂದಿರಂಥವನು ನಾನಾಗಲಿಲ್ಲವಲ್ಲ? ಎಲ್ಲರ ಮದುವೆಯಂತಹುದೂ ಅಲ್ಲ. ಎಲ್ಲರ ಸಂಸಾರದಂತಹುದಂತೂ ಅಲ್ಲವೇ ಅಲ್ಲ. ಅವಳ ತಂದೆ ತಾಯಿ ಮದುವೆ ಮಾತುಕತೆಗೆಂದು ನಮ್ಮ ಮನೆಗೆ ಬಂದ ದಿನ ನನ್ನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದರು! ಮದುವೆಯ ದಿನ ನಾನು ನಯಾ ಪೈಸೆಯ ಕಮಾಯಿ ಇಲ್ಲದ ಪಡ್ಡೆ ಹುಡುಗ. ಅದಕ್ಕೆ ಮುಂಚೆ ಜೊತೆಗೆ ಓಡಾಡುತ್ತಿದ್ದಾಗ 'ಎಲ್ಲಾ ಬಿಟ್ಟು ಗೂಳಿಯಂಥೋನ ಜೊತೆ ಓಡಾಡ್ತೀಯಲ್ಲಮ್ಮಾ?' ಎಂಬ ಮೂದಲಿಕೆ. ಒಂದು ನೌಕರಿಗೆ, ಒಂದು ವೃತ್ತಿಗೆ, ಒಂದು ಮನೆಗೆ, ಒಂದು ಊರಿಗೆ, ಕಡೆಯ ಪಕ್ಷ ಒಂದು ನಿಶ್ಚಿತ ಜೀವನ ವಿಧಾನಕ್ಕೆ ಅಂಟಿಕೊಳ್ಳದ ಈ ಅಲೆಮಾರಿ ಜೋಗಿ ಜಂಗಮನನ್ನು ಕಟ್ಟಿಕೊಂಡು ಹೆಣಗುವ ಸೌಭಾಗ್ಯ ಎಲ್ಲರಿಗೂ ಎಲ್ಲಿಂದ ಬಂದೀತು? ಆಕೆ ಕೆಲಕಾಲ ನನ್ನ ಶಿಕ್ಷಕಿಯಾಗಿದ್ದಳು. ಅದು ಬಹುಶಃ ನಮ್ಮ ಸ್ನೇಹಕ್ಕೊಂದು ನೆಪವಾಗಿತ್ತು. ಆಕೆ ನನಗಿಂತ ಹಿರಿಯಳು. ನನ್ನ ತಾಯಿಗೆ ತುಂಬ ಆತ್ಮೀಯಳಾಗಿದ್ದವಳು. ತುಂಬಿದ ಮನೆಯಲ್ಲಿ ಬೆಳೆದವಳು. ನನಗಾಗಿ ಎಲ್ಲರನ್ನೂ ಎಲ್ಲವನ್ನೂ ಬಿಟ್ಟು ಹೊರಟವಳು.

ಏನು ನಂಬಿಕೊಂಡು ಬಂದಳು?

ಕೇವಲ ಪ್ರೀತಿಯನ್ನ!

ಇವತ್ತು ಉಳಿದಿರುವುದೇನು?

ಕೇವಲ ಪ್ರೀತಿ!

ಅವಳಿಗೆ ನನ್ನ ತಾಯಿ ಮಾಡಿಸಿಟ್ಟ ಬಳೆಗಳೆರಡನ್ನೂ ನಾನು ಮಾರಿ ಕುಡಿದು ಹಾಕಿದೆ. ಇದ್ದ ನೌಕರಿಗಳನ್ನೆಲ್ಲ ಬಿಟ್ಟೆ. ಕೆಲವನ್ನು ಕಳೆದುಕೊಂಡೆ. ಸಂಬಳವಿಲ್ಲದೆ ಮುಖ ಒಣಗಿಸಿಕೊಂಡು ಮನೆಗೆ ಬಂದಾಗಲೂ 'ಶೂನ್ಯದಿಂದ' ಎಂಬಂತೆ ಇದ್ದುದನ್ನೇ ಹೊಂದಿಸಿ ಅಡುಗೆ ಮಾಡಿ ಬಡಿಸಿದಳು ಲಲಿತೆ. ಅನೇಕ ಸಲ ನಮ್ಮ ಐದು ಜನರ ಸಂಸಾರ ಅವಳ ಸಂಬಳದ ಮೇಲೇ ನಡೆದಿದೆ. ಆಗ ಅವಳ ಸಂಬಳ ಎಷ್ಟಿತ್ತು ಅಂತ ಗೊತ್ತಿಲ್ಲ. ಇದ್ದಾಗ ಖರ್ಚು ಮಾಡುತ್ತಾ, ಇಲ್ಲದಾಗ ನನ್ನ ಜೇಬಿನಿಂದ ಕದಿಯುತ್ತಾ, ನಿಮ್ಮ ಜೇಬಿನಲ್ಲಿ ಹಣವೇ ಇರಲಿಲ್ಲ ಎಂದು ವಾದಿಸುತ್ತಾ... ಈ ಜಗತ್ತಿನ ಅತಿ ಜಾಣ ಪಿಕ್‌ಪಾಕೆಟರ್ ಆಕೆ! ಮಕ್ಕಳ ಫೀಸಿಗೂ, ನನ್ನ ಸಿಗರೇಟಿಗೂ, ತಿಂಗಳ ರೇಷನ್ನಿಗೂ ವ್ಯವಸ್ಥೆ ಮಾಡಿ ತನ್ನ ತಾಳಿಸರಕ್ಕೆ ಪಿನ್ನು ಹಾಕಿಕೊಳ್ಳುತ್ತಿದ್ದಳು.

ಬಹುಶಃ ಅವಳಿಗೆ ಇದೆಲ್ಲ ಗೊತ್ತಿತ್ತು. ಇವನಿಗೊಂದು ನೌಕರಿ ನೆಲೆ ಇರುವುದಿಲ್ಲ. ಕುಡಿತ ಇವನನ್ನು ಬಿಟ್ಟು ಕದಲುವುದಿಲ್ಲ. ಸಿಟ್ಟು ಕರಗುವುದಿಲ್ಲ. ಇವನೊಬ್ಬ ಜವಾಬ್ದಾರಿಯುತ ಗಂಡನಾಗಲಾರ.

ಎಲ್ಲವೂ ಗೊತ್ತಿತ್ತು. ಗೊತ್ತಿದ್ದೇ ಆದಳು. ಸಂಜೆಯಾದ ಕೂಡಲೇ ನಾನು ಜುಬ್ಬಾ ಏರಿಸಿಕೊಂಡು ಮೊಬೈಕಿನ ಚಾವಿ ತಿರುವುತ್ತಿದ್ದರೆ, ಮನೆ ಮುಂದಿನ ಜಗುಲಿಯ ಮೇಲೆ ಕುಳಿತು, 'ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು, ನಿಷ್ಠೆಯಿಂದಲೆ ಪೋಪನಲ್ಲಿಗೆ. ಕಟ್ಟಕಡೆಗಿದು ಖಂಡಿತಾ!' ಎಂದು ಬೇಕಂತಲೇ ನನ್ನ ಮಗಳಿಗೆ ಗೋವಿನ ಹಾಡು ಹೇಳಿಕೊಡುತ್ತಿದ್ದಳು. ನಿಷ್ಠೆಯಿಂದ ಹೋಗುತ್ತಿದ್ದುದು ಬಾರ್‌ಗೆ ಅಂತ ಅವಳಿಗೂ, ಅಮ್ಮನಿಗೂ ಚೆನ್ನಾಗಿ ಗೊತ್ತಿತ್ತು. ಅದನ್ನು ತಿದ್ದಲಾಗದ ದೌರ್ಭಾಗ್ಯ ಎಂದು ಒಪ್ಪಿಕೊಂಡಿದ್ದರಿಂದ ಇಬ್ಬರೂ ನಕ್ಕು ಸುಮ್ಮನಾಗಿಬಿಡುತ್ತಿದ್ದರು. ಆದರೆ ಮಾರನೆಯ ದಿನ ಮುಂಜಾನೆ ಅವಳ ಮುಖದಲ್ಲಿ 'ಕುಡುಕನ ಹೆಂಡತಿ' ಅನ್ನಿಸಿಕೊಂಡ ನೋವು, ಅವಮಾನಗಳು ಮಡುವುಗಟ್ಟಿ ನಿಂತಿರುತ್ತಿದ್ದವು. 'Sorry ಅನ್ನುವ ನೈತಿಕ ಸ್ಥೈರ್ಯ ಕೂಡ ನನ್ನಲ್ಲಿರುತ್ತಿರಲಿಲ್ಲ. ಎಷ್ಟೋ ಸಲ ಬೇಕಂತಲೇ ಅವಳು ಶಾಲೆಗೆ ಹೋಗುವ ತನಕ ಏಳದೆ ಬಿದ್ದುಕೊಂಡಿರುತ್ತಿದ್ದೆ. ಒಂದು ದಿನಕ್ಕೂ ನಿಲೆ ಹಾಕಿ 'ಹೀಗೇಕೆ?' ಎಂದು ಕೇಳಲಿಲ್ಲ. ವಾದಿಸಲಿಲ್ಲ. ದಂಡಿಸಲಿಲ್ಲ. ನನ್ನ ಉಪಟಳ ವಿಪರೀತವಾದಾಗ ಕತ್ತಲಲ್ಲಿ ಒಬ್ಬಳೇ ಕುಳಿತು ಕಣ್ಣೀರು ಕೆಡವಿದ್ದು ಬಿಟ್ಟರೆ, ಮತ್ತೊಂದು ಮಾಡಲಿಲ್ಲ.

ಆದರೆ ಇದ್ದಕ್ಕಿದ್ದಂತೆ ಒಂದು ದಿನ ದೈವ ಭಕ್ತಿ ಬೆಳೆಸಿಕೊಂಡು ಬಿಟ್ಟಳು. ಮೊದಲು ಗಣಪತಿಯೊಬ್ಬನೇ ಇದ್ದ. 'ಶನಿ ದೇವರ ಪೂಜೆ ಮಾಡಿ... ಗಂಡನಿಗೆ ಬುದ್ಧಿ ಬರ‍್ತದೆ' ಅಂತ ಯಾರೋ ಹೇಳಿದರಂತೆ, ಶನಿ ಮಹಾರಾಜನ ಫೊಟೋ ಕಾಗೆ ಸಮೇತ ಬಂದು ಮನೆಯಲ್ಲಿ ಸ್ಥಾಪಿತವಾಯಿತು. ನಾನಿರುವಾಗ ಮತ್ತೊಬ್ಬ ಶನಿ ಯಾತಕ್ಕೆ? ಅಂದೆ. ಕೇಳಲಿಲ್ಲ. ಎಳ್ಳೆಣ್ಣೆಯ ದೀಪ ಹಚ್ಚಿ ಬಾಡಿಗೆ ಮನೆಯ ಗೋಡೆಗಳನ್ನು ಕರ್ರಗೆ ಮಾಡಿದಳು. 'ಬುದ್ಧಿ' ಎಂಬುದು ನನಗೂ ಬರಲಿಲ್ಲ. ಶನಿಗೂ ಬರಲಿಲ್ಲ. ಮನೆಯ ಮೂಲೆಯಲ್ಲಿ ನಾನು ತಂದು ಒಟ್ಟುತ್ತಿದ್ದ ಖಾಲಿ ಬಾಟಲುಗಳನ್ನು ಅಸಹ್ಯದಿಂದ, ಅವಮಾನದಿಂದ ಆಚೆಗೆ ಹಾಕುತ್ತಿದ್ದಳು. ಖಾಲಿ ಬಾಟಲಿ ಮಾರಿ ಬಂದ ಹಣವನ್ನು ಎಡಗೈಯಲ್ಲೂ ಮುಟ್ಟುತ್ತಿರಲಿಲ್ಲ. ಸರಿ ಸುಮಾರು 1975ರಿಂದ ಗಂಟುಬಿದ್ದ ಅಭ್ಯಾಸ 1995ನ್ನು ತಲುಪುವ ಹೊತ್ತಿಗೆ ನಮ್ಮ ಮನೆಯ ಪ್ರತಿ ಮೂಲೆಯನ್ನೂ ಘಾಸಿಗೊಳಿಸಿತ್ತು. ಪ್ರತಿ ಗೋಡೆಯನ್ನೂ ಕೆಡವಿ ಹಾಕಿತ್ತು. ಪ್ರೀತಿಯೆಂಬ ವಸ್ತುವೊಂದು ಅಸ್ತಿತ್ವದಲ್ಲಿರದೆ ಹೋಗಿದ್ದರೆ ನಾವೆಲ್ಲ ಏನಾಗಿಬಿಡುತ್ತಿದ್ದೆವೋ?

ಹಾಗಾಗಲಿಲ್ಲ. 1995ರ ಮೇ ಇಪ್ಪತ್ತೆರಡರ ರಾತ್ರಿ ನಾನು ಭೂಗತ ಲೋಕದ ಕೆಲವರೊಂದಿಗೆ ಕಾಕ್ಸ್‌ಟೌನ್‌ನ ಮನೆಯೊಂದರಲ್ಲಿದ್ದೆ. ಬೆಳಗಾದರೆ ಮನೆಯಲ್ಲಿ ಹಬ್ಬ. ನಮ್ಮ ಮದುವೆಯ ಆನಿವರ್ಸರಿ. ದೇವರಲ್ಲಿ ನಂಬುಗೆಯಿಲ್ಲದ ನಾನು ಇಷ್ಟದಿಂದ ಆಚರಿಸಿಕೊಳ್ಳುವ ಹಬ್ಬಗಳೆಂದರೆ ಆನಿವರ್ಸರಿ ಮತ್ತು ನಮ್ಮ ಹುಟ್ಟುಹಬ್ಬಗಳು. ಇಪ್ಪತ್ತೆರಡರ ರಾತ್ರಿ ಕಾಕ್ಸ್‌ಟೌನ್‌ನ ಮನೆಯಲ್ಲಿ ಒಂದು ವಿಲಕ್ಷಣ ಘಟನೆ ನಡೆದಿತ್ತು. ಅದು ನನ್ನ ಜೀವನದ ಬಹುದೊಡ್ಡ ತಿರುವಾದೀತೆನಿಸಿರಲಿಲ್ಲವಾದರೂ ನನ್ನೊಳಗೊಂದು ಹೊಸ ದೀಪ ಹೊತ್ತಿಕೊಂಡಿತ್ತು. ಇಪ್ಪತ್ಮೂರರ ಮುಂಜಾನೆ ದಡಬಡಿಸಿ ಎದ್ದವನೇ ಪದ್ಮನಾಭನಗರದ ಮನೆಗೆ ಓಡಿ ಬಂದೆ. ಬಾಗಿಲಲ್ಲಿ ನಿಂತಿದ್ದಳು. ಕೈಯಲ್ಲಿ ಬಿಡಿಗಾಸಿಲ್ಲದವನು ಆನಿವರ್ಸರಿಗೆ ಗಿಫ್ಟೇನು ತರುತ್ತಾನೆ? ಅವಳಿಗೆ ಗೊತ್ತು. ಯಾವತ್ತೂ ಗಿಫ್ಟು ಕೇಳಿದವಳಲ್ಲ.

ಅವತ್ತು ಮನೆಯೊಳಕ್ಕೆ ಬಂದವನೇ 'ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ' ಅಂದೆ. ಮಕ್ಕಳು ಇಬ್ಬರನ್ನೂ ಕೂಡಿಸಿಕೊಂಡು ಕಾಫಿ ಮಾಡಿಕೊಟ್ಟು, ಮುತ್ತು ಕೊಟ್ಟು ಕಾರ್ಡು ಕೈಗಿರಿಸಿದರು. ನಾನು ಗದ್ಗದಿತನಾಗಿದ್ದೆ. ಎಲ್ಲರನ್ನೂ ಒಂದು ತೆಕ್ಕೆಗೆ ಅವಚಿಕೊಂಡು ಹೇಳಿದೆ, 'ಇವತ್ತು ನಿಜಕ್ಕೂ ಗ್ರೇಟ್ ಡೇ; ನಾನಿನ್ಮೇಲೆ ಕುಡಿಯೋದಿಲ್ಲ. ನನ್ನ ಬದುಕಲ್ಲಿನ್ನು ಆ ಅಧ್ಯಾಯ ಮುಗಿದು ಹೋಯಿತು. ಇವತ್ತಿಗೆ ನಾನು ಕೊಡಬಹುದಾದ ಗಿಫ್ಟು ಇದೊಂದೇ!'

ಲಲಿತೆ ನಗಲಿಲ್ಲ. ಮಾತಾಡಲಿಲ್ಲ. ಥ್ಯಾಂಕ್ಸ್ ಅನ್ನಲಿಲ್ಲ. ನನ್ನ ಬೆನ್ನಿಗೊಂದು ಗುದ್ದಿ ಅಡುಗೆ ಮನೆಗೆ ಎದ್ದು ಹೋದಳು. 'ಕೊಂಚ ಹೊತ್ತಿನ ನಂತರ ಎಳ್ಳೆಣ್ಣೆ ದೀಪದ ವಾಸನೆ ಹರಡಿತ್ತು. ಅವಳ ಕಣ್ಣಂಚಿನಲ್ಲಿ ನೀರು! ಆ ಸಂತಸದ ನೀರು ಇವತ್ತಿಗೂ ಅಲುಗಿಲ್ಲ. ಕುಡಿತ ಬಿಟ್ಟ ಮಾರನೆಯ ದಿನವೇ ಕ್ಲಬ್ಬಿಗೆ ಹೋದೆ. ಆಮೇಲೆ ಪಾರ್ಟಿಗಳನ್ನು ಕೊಟ್ಟಿದ್ದೇನೆ. ಗೆಳೆಯರನ್ನು ಕರೆಕರೆದು ಕುಡಿಸಿದ್ದೇನೆ. ಉಹುಂ... ನಾನು ಮುಟ್ಟಿರಲಿಲ್ಲ. ರವಿಯ will power ದೊಡ್ಡದು ಅಂದ ಗೆಳೆಯರಿದ್ದರು. 'ಯಾಕೇಂದ್ರೆ, ಮೊದಲು wills ಸೇದ್ತಿದ್ದೆ' ಅಂತ ತಮಾಷೆ ಮಾಡಿ ಸುಮ್ಮನಾಗಿದ್ದೇನೆ. ಆನಂತರ ಕುಡಿತ ಮತ್ತೆ ಆರಂಭವಾಯಿತು. ವರ್ಷಗಟ್ಟಲೆ ಕುಡಿದೆ. ಆದರೀಗ ಐದು ತಿಂಗಳಿನಿಂದ ಕುಡಿತವನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ.

ನನಗೆ ಗೊತ್ತು; ನಾನು ಯಾರಿಗಾಗಿಯೋ ಕುಡಿತ ಬಿಡಲಿಲ್ಲ. ನನಗಾಗಿ ಬಿಟ್ಟೆ. ಆದರೆ 'ಕುಡುಕನ ಹೆಂಡತಿ' ಎಂಬ ಅವಮಾನದಿಂದ ಅವಳನ್ನು ಮುಕ್ತನಾಗಿಸಿದೆ. ಗಂಡನಾಗಿ ಮತ್ತೇನನ್ನು ಕೊಡಲಾಗದಿದ್ದರೂ ಅದೊಂದು ನೆಮ್ಮದಿಯನ್ನು ವಾಪಸು ಮಾಡಿದೆನಲ್ಲ?
ಬರೆಯುತ್ತ ಕುಳಿತರೆ ಇದು ಒಂದು ಸಂಚಿಕೆಗೆ ಮುಗಿಯುವ 'ಖಾಸ್‌ಬಾತ್‌' ಅಲ್ಲ. ನಮ್ಮ ಈ ಮೂವತ್ನಾಲ್ಕು ವರ್ಷಗಳ ಬಾಳುವೆಯಲ್ಲಿ ನಡೆದ ಸಾವಿರಾರು ಘಟನೆಗಳ ಪೈಕಿ ಎರಡನ್ನು ಮಾತ್ರ ವಿವರಿಸಿ ಇವತ್ತಿನ ಮಾತು ಮುಗಿಸುತ್ತೇನೆ;

ಅದೊಂದು ಹಂತದಲ್ಲಿ ಹಾಗಾಯಿತು. ಹುಡುಗಿಯೊಬ್ಬಳು ನನ್ನನ್ನು ವಿಪರೀತವಾಗಿ ಹಚ್ಚಿಕೊಂಡು ಬಿಟ್ಟಿದ್ದಳು. ಅದು ಅವಳ ಹದಿ ವಯಸ್ಸಿನ ಅಪ್ಪಟ infatuation. ಅವಳಿಗಿಂತ ಕೊಂಚ ದೊಡ್ಡವನು ನಾನು. ನನಗಿಂತ ದೊಡ್ಡವಳು ಲಲಿತೆ. ಈ ವಿಷಯ ಲಲಿತೆಗೆ ಗೊತ್ತಾಗಲಿಕ್ಕಿಲ್ಲ ಅಂದುಕೊಂಡಿದ್ದೆ. ಗೊತ್ತಾಯಿತು. ಅವಳು ರೇಗುತ್ತಾಳೆ ಅಂದುಕೊಂಡಿದ್ದೆ. ರೇಗಲಿಲ್ಲ. ಸುಮಾರು ಎರಡು ವಾರದ
ನಂತರ ಆ ಹುಡುಗಿಯಿಂದ ನನಗೊಂದು ಪತ್ರ ಬಂದಿತ್ತು; 'ರವೀ, ಸುಡುವ ಸೂರ್ಯನನ್ನು ಹೇಗೆ ಆಕಾಶ ಮಾತ್ರ ಭರಿಸಬಲ್ಲದೋ...
ಹಾಗೆ ನಿನ್ನನ್ನು ಲಲಿತೆ ಮಾತ್ರ ಭರಿಸಬಲ್ಲಳು. Let's not meet again'

ಆಮೇಲೆ ಆ ಹುಡುಗಿ ನನಗೆ ಕಂಡಿಲ್ಲ. ಅವಳ ಬಗ್ಗೆ ನಾವಿಬ್ಬರೂ ಮಾತು ಕೂಡ ಆಡಿಲ್ಲ;

ಎರಡನೆಯ ಘಟನೆ 1979ರಲ್ಲಿ ನಡೆದದ್ದು. ಲಲಿತೆ ನೆತ್ತರ ಮಡುವಿನಲ್ಲಿ ಬಿದ್ದಿದ್ದಳು. ಅವಳನ್ನೆತ್ತಿಕೊಂಡು ಮುಖ ತೊಳೆದು, ತಲೆ ಬಾಚಿ, ಜಡೆ ಹಾಕಿ, ಬೆಚ್ಚಗೊಂದು ಶಾಲು ಹೊದಿಸಿ, ಅಂಗೈಯಲ್ಲಿಟ್ಟುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದೆ. 'ಬದುಕುವುದು ಕಷ್ಟ. ಬದುಕಿದರೂ ಕಷ್ಟ. ನಿಮ್ಮ ಹೆಂಡತಿ ತುಂಬ ತೊಂದರೆಯಲ್ಲಿದ್ದಾರೆ' ಅಂದರು ಡಾಕ್ಟರ್. ಬಳ್ಳಾರಿಯ ಹೆರಿಗೆ ಆಸ್ಪತ್ರೆಯ ಗೋಡೆಗಳಿಗೆ ಗೊತ್ತು ನಾನೆಷ್ಟು ಕನಲಿ ಹೋಗಿದ್ದೆ ಅಂತ. ಅಂದು ಅಲ್ಲಿದ್ದ ಡಾ.ಉಷಾ ರಂಗನ್ ಎಂಬ ದರಿದ್ರ ಹೆಂಗಸು ಲಂಚ ಕೇಳಿದ್ದಳು. ನನ್ನ ಹತ್ತಿರ ಐದು ರುಪಾಯಿ ಕೂಡ ಇರಲಿಲ್ಲ. ನನ್ನ ಅನಾರೋಗ್ಯಗೊಂಡ ಹೆಳವ ತಾಯಿಯನ್ನು ಬಿಟ್ಟರೆ ನನಗ್ಯಾರೂ ಇರಲಿಲ್ಲ. ಲಂಚದ ವಿರುದ್ಧ ಆಕ್ರೋಶ ಹುಟ್ಟಿದ್ದೇ ಅವತ್ತು. ಡಾ. ಉಷಾ ರಂಗನ್‌ಳ ಛೇಂಬರಿನೊಳಕ್ಕೆ ನುಗ್ಗಿ ಅಕ್ಷರಶಃ ಜೀವದ ಬೆದರಿಕೆ ಹಾಕಿದ್ದೆ. ನನ್ನ ಲಲಿತೆಗೆ ಏನಾದರೂ ಆಗಿಬಿಟ್ಟರೆ ನಿನ್ನ ಜೀವ ಉಳಿಸೋದಿಲ್ಲ ಎಂದು ಹೇಳಿದ್ದೆ. ಕ್ರುದ್ಧ ಜ್ವಾಲಾಮುಖಿಯಂತಾಗಿದ್ದೆ. ಹಾಗೆ ಕುದಿಯುತ್ತಲೇ ಬಂದು ಲಲಿತೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡು ಹೇಳಿದೆ 'ನೀನು ನನ್ನನ್ನು ಮದುವೆಯಾಗಬಾರದಿತ್ತು. ಇಂಥ ನಿರ್ಭಾಗ್ಯನನ್ನ!'

ಸುಮ್ಮನೆ ನಕ್ಕಿತ್ತು ಭೂಮಿ ತೂಕದ ಸಹನೆ!

ಇವತ್ತಿಗೂ ನಗುತ್ತದೆ. ನಾನು ನಾಯಿ ಕಡಿದವನಂತೆ ಕಿರಿಚಾಡುವಾಗ, ಕೆಲಸದ ಒತ್ತಡದಲ್ಲಿ ನಲುಗಿ ಹೋದಾಗ, ಬದುಕಿನ ಧಡಕಿಗಳ ನಡುವೆ ಕಳೆದು ಹೋದಾಗ... ಆಗೆಲ್ಲ ನಗುತ್ತಲೇ ಇರುತ್ತದೆ. ದಣಿದು ದಿಕ್ಕೆಟ್ಟು, ಸೋತು ಕಂಗಾಲಾದಾಗ 'ಇಗೋ ಇಲ್ಲಿದ್ದೇನೆ' ಅನ್ನುತ್ತದೆ. ಕೈ ಹಿಡಿದು ಕರೆದುಕೊಳ್ಳುತ್ತದೆ.

ಅವಳು ಬದುಕಿನ ಮೊಟ್ಟ ಮೊದಲ ಮೆಟ್ಟಿಲ ಮೇಲೆ ನಿಂತು ಕೇಳಿದ ಪ್ರಶ್ನೆ;

'ಎಲ್ಲೋ ಜೋಗಪ್ಪ ನಿನ್ನ ಅರಮನೆ!'

ಅದಕ್ಕಿನ್ನು ಉತ್ತರ ಸಿಕ್ಕಿಲ್ಲ.

ಆದರೆ ಅನಂತರದ ದಿನಗಳಲ್ಲಿ ನಾನು ಅವಳ ಕೈಗೆ ದುಡ್ಡು ಕೊಟ್ಟು ಹೇಳಿದೆ;

'ಪಿನ್ನು ಹಾಕಿದ್ದು ಸಾಕು. ತಾಳಿ ಸರ ಮಾಡಿಸಿಕೋ!'

ಈಗ ಹೇಳಿ; ನಿಮ್ಮ ಮನೆಯ ಕಥೆಯೂ ಇದೇನಾ?

Thursday, August 1, 2013

ಸರಕಾರಗಳ ಮಧ್ಯೆ ಸಿಕ್ಕಿ ನಲುಗುತ್ತಿರುವ 'ಪುಣ್ಯಕೋಟಿ' ಕಥೆ...!

ನಿಮಗೆ ಪುಣ್ಯಕೋಟಿ ಕಥೆ ಗೊತ್ತೇ ಇದೆ ಅನ್ಕೊತಿನಿ...
ಸರಕಾರೀ ಶಾಲೆಯ ೮ ನೆ ತರಗತಿಯ ಪಠ್ಯದಲ್ಲಿ ಈ ಹುಲಿ ಮತ್ತು ಗೋವಿನ ಕಥೆ ಬರುತ್ತೆ. ಆದರೆ ರಾಜ್ಯದಲ್ಲಿ ಸರಕಾರಗಳು ಬದಲಾದ ಹಾಗೆ ಈ ಹಾಡಿನ ಕಥೆಯ ತಿರುಳು ಬದಲಾಗುತ್ತಿದೆ..!
ಬಿ. ಜೆ. ಪಿ. ಸರಕಾರದ ಅವಧಿಯಲ್ಲಿ ಗೋ ಮಾಂಸ ಸೇವನೆ ತಪ್ಪು ಎಂಬುದನ್ನು ಸಾರುವ ಸಲುವಾಗಿ ಕಥೆಯ ಅಂತ್ಯದಲ್ಲಿ ಬದಲಾವಣೆ ಮಾಡಿತ್ತು.. 'ಹಸುವಿನ ಸತ್ಯಸಂಧತೆ ಮೆಚ್ಚಿ ಹುಲಿ ಇನ್ನುಮುಂದೆ ನಾನು ಮಾಂಸ ತಿನ್ನುವುದಿಲ್ಲ ಎಂದು ಶಪಥ ಸ್ವೀಕರಿಸುವುದು' ಇದು ಆ ಹಾಡಿನಲ್ಲಾದ ಬದಲಾವಣೆ...
ಆದರೆ ಈಗ ಸರಕಾರ ಬದಲಾಗಿದೆ..
ಹಾಗಾಗಿ ಹಾಡು ಬದಲಾಗಿದೆ..!
ಆ ಹುಲಿ ಹಸುವನ್ನು ಸುಮ್ಮನೆ ಬಿಟ್ಟಾಗ ಗೋಪಾಲಕ ಹುಲಿಯ ಉಪಟಳವನ್ನು ನಿಗ್ರಹಿಸುವದಕ್ಕಾಗಿ ಅದನ್ನು ಗುಂಡಿಕ್ಕಿ ಕೊಲ್ತಾನಂತೆ. ಅದು ಸಾಯುತ್ತಾ, ಸಾಯುತ್ತಾ ತನ್ನ ಮರಿಗೆ ಹೇಳುತ್ತಂತೆ, ನೋಡು ಮರಿ ನೀನು ಅನಾಥನಾದೆ, ಬೇಟೆ ಆಡುವುದು ನಮ್ಮ ಜನ್ಮ ಸಿಧ್ಧ ಹಕ್ಕು ಅದನ್ನು ಯಾವತ್ತೂ ಮರೆಯಬಾರದು ಅಂತ..
ಅದಕ್ಕೆ ಮರಿ ಹೇಳುತ್ತಂತೆ, ಅಮ್ಮ ಹಾಗಾದ್ರೆ ದೇವರು ನಮ್ಮನ್ಯಾಕೆ ಹುಲ್ಲು ತಿನ್ನುವ ಪ್ರಾಣಿಯನ್ನಾಗಿ ಸೃಷ್ಟಿಸಲಿಲ್ಲ ಅಂತಾ...?!
.
ಕಾಂಗ್ರೆಸ್ಸ್ ಗೆ ಒಂದು ಪ್ರಶ್ನೆ... ಗೋಪಾಲಕ ಅಂದ್ರೆ ಗೋವು ಕಾಯೋನು ಅಂತ ಅರ್ಥ. ಅವನು ಬೇಟೆಗಾರ ಹೇಗಾದ ಅಂತ ಸ್ವಲ್ಪ ದಯವಿಟ್ಟು ತಿಳಿಸಿ ಹೇಳಿ...!

Thursday, July 18, 2013

Yes... Human Rights....

Thursday, July 18, 2013
A crowd of Jihadis surrounded a BSF camp and fatally assaulted and wounded them. These traitors are not even grateful for the fact that every year hundreds of our jawans give their lives away for protecting these stone-pelters from Pakistani terrorists.

But what else can we expect from people who killed lakhs of Kashmiri Hindus and Sikhs. Now after eradicating Hindus and Sikhs, they claim Kashmir is theirs.

Have no doubt about the fact that a lot of those in Kashmir hate India and support terrorists in the name of 'azadi'. But dare our security forces take them in custody for interrogation and everyone starts crying about Human Rights.
What about the human rights of our Jawans ?
and what about the Human rights of Kashmiri Hindus and Sikhs?

Friday, May 31, 2013

ಕಾಂಗ್ರೆಸ್ ಮಾಡೋ ಒಂದು ಕೆಲ್ಸಕ್ಕಾದ್ರೂ "ಜೈ" ಅನ್ನೋಣ!

ಕೆಲವರಿಗೆ ಬೆಳೆಗ್ಗೆ ಎದ್ರೆ ಅಡಿಕೆ ಬೇಕು, ಚಹಾ ಕುಡಿದ್ ಮೇಲೆ ಅಡಿಕೆ ಬೇಕು, ಹರಟೆ ಹೊಡೆಯುವಾಗ ಅಡಿಕೆ ಬೇಕು, ಹೀಗೆ, ಮದುವೆ, ಮುಂಜಿ, ಗೃಹ ಪ್ರವೇಶ, ನಾಮಕರಣ ಇಂಥ ಎಲ್ಲ ಕಾರ್ಯಕ್ರಮಕ್ಕೂ ಊಟ ಆದ್ ಮೇಲೆ ಅಡಿಕೆ ಬೇಕೇ ಬೇಕು! ಅಷ್ಟೆ ಯಾಕೆ, ಎಲ್ಲರ ಮನೆಯಲ್ಲೂ ಫ್ರಿಜ್ ಮೇಲೆ ಒಂದು ಅಡಿಕೆ ಡಬ್ಬಿ ಇರಲೇಬೇಕು!


.

ಮೇಲೆ ಕೊಟ್ಟಿರೋ ಎಲ್ಲ ಉದಾಹರಣೆಗಳಲ್ಲಿ ಎಲ್ಲೂ ನಾವು "ಗುಟ್ಕಾ" ಉಪಯೋಗ ಮಾಡಲ್ವಲ್ಲಾ, ಅದು ಹೇಗೆ ಅಡಿಕೆ ಬೆಳೆಗಾರರಿಗೆ ನಷ್ಟ ಆಗುತ್ತೆ?!

.

ಕಾಂಗ್ರೆಸ್ ಮಾಡೋ ಒಂದು ಕೆಲ್ಸಕ್ಕಾದ್ರೂ "ಜೈ" ಅನ್ನೋಣ....!!!

Thursday, May 16, 2013

ಹೀಗಿದೆ ನೀವು ಓಟು ಹಾಕಿರುವ ಸರಕಾರ!



ಸಾರಾಯಿಯನ್ನು ಮತ್ತೆ ಜಾರಿಗೆ ತರಲು ಕಾಂಗ್ರೆಸ್ ಸರಕಾರ ಚಿಂತನೆ...!
.
ಏನು ಮಾಡಲು ಹೊರಟಿದ್ದಾರೆ ಈ ಸಿಧ್ಧರಾಮಯ್ಯನವರು?
.
ಬಡವರಿಗೆ ಉತ್ತಮ ಮದ್ಯ ಖರೀದಿಸಲು ಆಗುತ್ತಿಲ್ಲ, ಅದಕ್ಕಾಗಿ, ಅವರ ಶ್ರೇಯೋಭಿವ್ರುಧ್ಧಿಗಾಗಿ ನಾವು ಸಾರಾಯಿಯನ್ನು ಮತ್ತೆ ಜಾರಿಗೆ ತರುತ್ತಿದ್ದೇವೆ...!
ಆದರೆ ಈ ಘೋಷಣೆಗೆ ಸಿಧ್ಧರಾಮಯ್ಯ ಅವರು ಕೊಡುವ ಸಬೂಬೇ ಬೇರೆ. ಉತ್ತಮ ಗುಣದ ಮದ್ಯಕ್ಕೆ ಬೆಲೆ ಜಾಸ್ತಿ, ಬರಿ ಹತ್ತು ರೂಪಾಯಿಯಲ್ಲಿ ಸ್ಥಳೀಯ ಕಳ್ಳರು ತಯಾರಿಸಿದ ಸಾರಾಯಿಯನ್ನು ಕುಡಿದು ತಮ್ಮ ಹಣವನ್ನು ಉಳಿತಾಯ ಮಾಡಿಕೊಳ್ಳಲಿ ಎಂದಿದ್ದಾರೆ..
.
ನೆನೆಪಿರಲಿ ಸ್ನೇಹಿತರೆ... ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಸಾರಾಯಿಗೆ ನಿಷೇಧ ಹೇರಿತ್ತು, ಅದಕ್ಕೆ ಪೂರಕವೆಂಬಂತೆ "ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್" ಹೆಸರಿನಲ್ಲಿ ಸರಕಾರಿ ಪ್ರಾಯೋಜಿತ ಮದ್ಯದ ಅಂಗಡಿಗಳನ್ನು ತೆರೆದು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ, ಪರವಾನಿಗೆ ಹೊಂದಿದ ಮದ್ಯಗಳನ್ನು ಮಾರುತ್ತಿತ್ತು...
.
ಅಗ್ಗದ ಬೆಲೆಯ ಸಾರಾಯಿ ಕುಡಿದರೆ ಹಣ ಉಳಿತಾಯವಾಗುತ್ತೋ ಅಥವಾ ಆರೋಗ್ಯ ಹಾಳಾಗುತ್ತೋ ಆ ಕವಿರತ್ನ ಕಾಳಿದಾಸನೇ ಬಲ್ಲ...
.
ಬಿ.ಜೆ.ಪಿ ಸರಕಾರವಿರುವ ದೂರದ ಗುಜರಾತ್ ನಲ್ಲಿ ಮದ್ಯಪಾನವೇ ನಿಷೇಧವಿರುವಾಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ಸ್ ಸರಕಾರದ ನಿಷೇದ ಮಾಡಿದರುವುದನ್ನೇಲ್ಲಾ ರದ್ದು ಮಾಡುತ್ತಿದೆ..!
.
ಒಂದು ವೇಳೆ ಸಾರಾಯಿಯನ್ನು ಮತ್ತೇ ಜಾರಿಗೆ ತಂದದ್ದೇ ಆದರೆ ಕರ್ನಾಟಕದ ಎಲ್ಲ ಮಹಿಳ ಮಣಿಗಳ ಆಕ್ರೋಶಕ್ಕೆ ಮಾನ್ಯ ಮುಖ್ಯಮಂತ್ರಿಗಳು ಬಲಿಯಾಗಬೇಕಾಗಬಹುದು...
.
ಇಂದು ಸಾರಾಯಿ ನಿಷೇಧ ರದ್ದು, ನಾಳೆ ಲಾಟರಿ ಉದ್ಯಮ ಮತ್ತೆ ಪುನರಾರಂಭದ ಸೂಚನೆ, ನಾಡಿದ್ದು ಗೋಹತ್ಯೆ ನಿಷೇಧಕ್ಕೆ ತಿದ್ದುಪಡಿ ತರುವುದು, ಮುಂದಿನ ದಿನಗಳಲ್ಲಿ ಮುಕ್ತ ವೈಶ್ಯವಾಟಿಕೆಗೆ ಚಾಲನೆ...
.
ಈ ಎಲ್ಲ ಅದ್ಭುತ ದೃಶ್ಯಾವಳಿಗಳನ್ನು ನಾವು ಬರುವ ಐದು ವರ್ಷಗಳ ಕಾಂಗ್ರೆಸ್ ಅಧಿಕಾರದಲ್ಲಿ ತಪ್ಪದೇ ನೋಡಬಹುದು...
.
ನಾನಂತು ಈ ಸರಕಾರಕ್ಕೆ ನನ್ನ ಓಟು ನೀಡಿಲ್ಲ, ಓಟು ಹಾಕಿದ್ದವರಿಗೆ ಅಪರಾಧ ಮನೋಭಾವ ಕಾಡಿರಲಿಕ್ಕೆ ಸಾಕು..

Thursday, April 18, 2013

ಸಾವು - ಸಾವನ್ನು ಅಳಿಸಿಬಿಡೋದು ಸಾವಲ್ಲ, ನೋವು

ಆವತ್ತು ಬೆಳಗ್ಗೆ ಮನೆ ಮುಂದೆ
ಜನ.
ನೋಡಲಿಕ್ಕೆಂದು ನನ್ನ
ಸತ್ತ ಹೆಣ.
ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿ
ಹಲವರಿಗೆ ಸಾಯದಿದ್ದರೂ
ಪ್ರಾಣ ಹೋಗಿರಲಿಕ್ಕೆ ಸಾಕು ಎಂಬ
ಖಾತ್ರಿ.

ಸಾಯೋ ವಯಸ್ಸಲ್ಲ
ಇನ್ನು ಸಾಧಿಸೋದಿತ್ತು
ದುರಭ್ಯಾಸಗಳಿದ್ದವು, ಯಾರಿಗಿಲ್ಲ ಬಿಡಿ.
ಕಾಯಿಲೆ ಇತ್ತಂತೆ ಹೌದೇ?
ಮನೆ ಕಡೆ ಚೆನ್ನಾಗಿರಬೇಕಲ್ಲ?
ನಿನ್ನೆ ಬೆಳಗ್ಗೆ ಮಾತಾಡಿದ್ದೆ ಕಣ್ರೀ
ಮನುಷ್ಯ ಹೀಗೇಂತ ಹೇಳಕ್ಕಾಗಲ್ಲ!
ಹೀಗೆ ಆಡಬೇಕಾದ ಮಾತುಗಳನ್ನು ಮಥಿಸಿ
ಕೂಡಿಸಿ ಭಾಗಿಸಿ ಗುಣಿಸಿ
ಅವನ್ನೆಲ್ಲ ನಾಲಗೆ ಕರವಸ್ತ್ರದಲ್ಲಿ ಮಡಿಸಿಟ್ಟುಕೊಂಡು
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ.

ಸಾಯುವುದು ಇಷ್ಟೆಲ್ಲ ಸಂಭ್ರಮ
ಅಂತ ಗೊತ್ತಿರಲೇ ಇಲ್ಲ.
ಜೀವ ನೀನು ಅಂತ ತಬ್ಬಿ ಪ್ರೇಮಿಸಿದ
ಅವಳು ಕೈ ಕೊಟ್ಟಾಗ ಸತ್ತಿದ್ದೆ.
ನಾನು ಬರೆದ ಕವಿತೆಯನ್ನು
ನಾನೇ ಹರಿಯುತ್ತಾ ಸತ್ತಿದ್ದೆ.
ಬದುಕೋದು ಕಲೀರಿ ಅಂತ
ಸಂಪಾದಕರು ಗದರಿದಾಗ ಸತ್ತಿದ್ದೆ.
ನಿಮಗೆ ತಾತ್ವಿಕ ಬದ್ಧತೆ ಇಲ್ಲ
ಅಂದಾಗೊಮ್ಮೆ ಸತ್ತಿದ್ದೆ.
ಕೆಳಗಿದ್ದವರು ನಕ್ಕಾಗ, ಮೇಲಿದ್ದವರು ಮೊಟಕಿದಾಗ
ನಾನು ಮೇಲೂ ಇಲ್ಲ ಕೆಳಗೂ ಇಲ್ಲ ಎಂದು ಗೊತ್ತಾದಾಗ
ನನ್ನ ಮನೆ ದಾರಿ ಮರೆತಾಗ
ಅವಳ ಮನೆಯಲ್ಲಿ ಚಪ್ಪರ ಎದ್ದಾಗ
ಶ್ರೀರಾಮ ವಾಲಿಯನ್ನು ಮೋಸದಿಂದ ಕೊಂದಿದ್ದು ಗೊತ್ತಾದಾಗ
ಅಶ್ವತ್ಥಾಮ ಹೆಸರಿನ ಆನೆ ಸತ್ತಿದ್ದು
ಅಂತ ಕೃಷ್ಣ ಪಿಸುಗುಟ್ಟಿದಾಗ
ಭಗವದ್ಗೀತೆ ನಿನಗೆ ಕಡ್ಡಾಯ ಎಂದಾಗ
ಪದೇ ಪದೇ ಸತ್ತಿದ್ದೆ.
ಯಾರೂ ಸಂಭ್ರಮಿಸಿರಲಿಲ್ಲ.

ನೆತ್ತಿಯಲ್ಲಿ ಮೊದಲ ಬಿಳಿಕೂದಲು ಕಂಡಾಗ
ಅಕ್ಷರ ಮಸುಕಾದಾಗ
ಕವಿತೆ ಅರ್ಥವಾಗದೇ ಛೇಡಿಸಿದಾಗ
ಕೆನ್ ಯೂ ಸ್ಪೀಕ್ ಇನ್ ಇಂಗ್ಲಿಷ್ ಅಂತ
ಮಂಡ್ಯದ ಮೇಷ್ಟ್ರು ಕೇಳಿದಾಗ
ಸಿನಿಮಾ ಸಲೀಸು ಅಂತ ನಿರ್ದೇಶಕ ನಕ್ಕಾಗ
ವೋಲೆ ಸೋಯಿಂಕಾ? ಯಾರದು?
ಅಂತ ಗೆಳತಿ ಕೇಳಿದಾಗ
ಮತ್ತೆ ಮತ್ತೆ ಸತ್ತಿದ್ದೆ.

ಸಾವು ನಿಗೂಢ.
ನಾವು ಸಾಯುವುದು ಯಾರಿಗೂ ಗೊತ್ತೇ ಆಗುವುದಿಲ್ಲ.
ಅದು ಎಲ್ಲರಿಗೂ ತಿಳಿದಾಗ
ನಮಗೆ ಅರಿವೇ ಆಗುವುದಿಲ್ಲ.
ನಮ್ಮ ಸಾವು ನಮ್ಮದು
ಅವರ ಸಾವು ನಮ್ಮದು

ಎರಡೂ ಒಂದೇ ಆದರೆ
ಅವನು ಮಹಾತ್ಮ
ಕವಿ
ಅಥವಾ
ಮನುಕುಲದ ಶತ್ರು.

Monday, February 25, 2013

ಮಿಡತೆಯ ಕೂಗಿಗೆ ಓಗೊಡುತ್ತಾ!!!

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಓದಿದ ಹಳೇ ಕತೆಯ ಹೊಸ ಅವತರಣಿಕೆ ವಿಚಿತ್ರ ಕಚಗುಳಿ ನೀಡಿತು. ಆ ಖುಷಿ ನಿಮಗೂ ಇರಲಿ ಎಂದು...

ಹೀಗೊಂದು ಹಳೆ ಕತೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳಿದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಹೈರಾಣಾಗಿ ಸತ್ತುಹೋಯಿತು.
ಒಂದು ವೇಳೆ ಇದು ಭಾರತದಲ್ಲಿ ನಡೆದಿದ್ದರೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು, ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳೆದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಕಂಗಾಲಾಗಿ ಇನ್ನೇನು ಸಾಯುವುದರಲ್ಲಿತ್ತು...ಅಷ್ಟರಲ್ಲಿ ಅದು ಸುದ್ದಿ ವಾಹಿನಿಗಳ ಕಣ್ಣಿಗೆ ಬಿದ್ದುಬಿಟ್ಟಿತು!
ಮಿಡತೆ ಚಳಿಯಿಂದ ಸಾಯುತ್ತಿದ್ದರೂ, ಆರಾಮಾಗಿ ಗೊರಕೆ ಹೊಡೆಯುತ್ತಿದ್ದ ಇರುವೆಯ ವೀಡಿಯೋವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದವು . ಪ್ರಪಂಚದಾದ್ಯಂತ ಈ ವಿಡಿಯೋ ಹರಿದಾಡಿ ಮಿಡತೆಯ ಪರಿಸ್ಥಿತಿಗೆ ಎಲ್ಲರೂ ಮರುಗಿದರು. ಅಂತಹ ನೀಚ ಇರುವೆಯನ್ನು ದೇಶದಲ್ಲಿ ಇರಲೂ ಬಿಡಬಾರದು ಎಂಬ ಆರ್ಭಟ ಎಲ್ಲೆಡೆಯೂ ಮಾರ್ದನಿಸತೊಡಗಿತು.
ಇರುವೆಯ ಮನೆಯ ಮುಂದೆ ಅರುಂಧತಿ ರಾಯ್ ಧರಣಿ ಕೂತಳು. ಮೇಧಾ ಪಾಟ್ಕರ್ ಮಿಡತೆಗಳ ನೇತೃತ್ವ ವಹಿಸಿ, 'ಎಲ್ಲಾ ಮಿಡತೆಗಳನ್ನೂ ಚಳಿಗಾಲದಲ್ಲಿ ಬೆಚ್ಚಗಿನ ಜಾಗಕ್ಕೆ ಸ್ಥಳಾಂತರಿಸಬೇಕು' ಎಂದು ಉಪವಾಸ ಕುಳಿತಳು. 'ಇದು ಮೈನಾರಿಟಿಗಳಿಗೆ ಮಾಡಿದ ಅನ್ಯಾಯ' ಎಂದು ಮಾಯಾವತಿ ಆರ್ಭಟಿಸಿದ್ದೂ ಆಯಿತು.
ಆ ಮಿಡತೆಯ ಮೂಲಭೂತ ಹಕ್ಕನ್ನು ಕಾಪಾಡುವಲ್ಲಿ ವಿಫಲವಾದ ಭಾರತ ಸರ್ಕಾರಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಷ್‌ನಲ್ ಹಿಗ್ಗಾ ಮುಗ್ಗಾ ಛೀಮಾರಿ ಹಾಕಿತು. ಮಿಡತೆಗೆ ಬೆಂಬಲ ನೀಡಬೇಕು ಎಂದು ಅಂತರ್ಜಾಲದಲ್ಲಿ ಆನ್‌ಲೈನ್ ಪಿಟೀಷನ್‌ಗಳು ಹರಿದಾಡತೊಡಗಿದವು (ಇದಕ್ಕೆ ಬೆಂಬಲ ನೀಡಿದರೆ ದೇವರು ನಿಮಗೆ ಸ್ವರ್ಗ ಪ್ರಾಪ್ತಿ ಮಾಡುತ್ತಾನೆ ಎನ್ನುವ ತಲೆಬರಹದಲ್ಲೂ ಕೆಲವು ಪಿಟೀಷನ್‌ಗಳು ಕಾಣಿಸಿಕೊಂಡವು).
ವಿರೋಧ ಪಕ್ಷಗಳ ಎಂಪಿಗಳು ಮಿಡತೆಯ ಮೇಲಾದ ಅನ್ಯಾಯವನ್ನು ಸಹಿಸಲಾರದೆ ಸಭಾತ್ಯಾಗ ಮಾಡಿದರು. ಪಶ್ಚಿಮ ಬಂಗಾಳದ ಎಡಪಕ್ಷಗಳು 'ಬಂಗಾಳ ಬಂದ್‌'ಗೆ ಕರೆ ನೀಡಿದರೆ, ಕೇರಳದ ಎಡ ಪಕ್ಷಗಳು ನ್ಯಾಯಾಂಗ ತನಿಖೆಗೆ ಆಗ್ರಹಿಸಿದವು.
ಎಲ್ಲರೂ ಸಮಾನರಾಗಿರಬೇಕು ಎನ್ನುವ ಉದ್ದೇಶದಿಂದ ಕೇರಳದ ಸಿಪಿಎಮ್, 'ಇನ್ಮುಂದೆ ಯಾವ ಇರುವೆಯೂ ಕಷ್ಟ ಪಟ್ಟು ದುಡಿಯುವಂತಿಲ್ಲ, ಮಿಡತೆಗಿಂತ ಹೆಚ್ಚು ಸಂಪಾದನೆ ಮಾಡುವಂತಿಲ್ಲ' ಎನ್ನುವ ಕಾನೂನನ್ನು ಜಾರಿಗೊಳಿಸಿತು.
ಆಗಿನ ಸಚಿವ ಲಾಲು ಪ್ರಸಾದ್ ಯಾದವ್, ಭಾರತದ ಎಲ್ಲಾ ರೈಲುಗಳಲ್ಲೂ ಮಿಡತೆಗಳಿಗಾಗಿಯೇ ಮೀಸಲಾದ 'ಮಿಡತೆ ರಥ' ಎನ್ನುವ ಉಚಿತ ಬೋಗಿಯನ್ನು ನಿಗದಿ ಪಡಿಸಿದರು.
ನ್ಯಾಯಾಂಗ ಸಮಿತಿ ಎಚ್ಚೆತ್ತು, 'Preventation of Terrorism Against Grasshoppers Act' (POTGA) ಎನ್ನುವ ಕರಡನ್ನು ಸಿದ್ಧಗೊಳಿಸಿ, ಅದು ಮುಂಬರುವ ಚಳಿಗಾಲದಿಂದಲೇ ಜಾರಿಯಾಗಬೇಕೆಂದು ಆದೇಶ ನೀಡಿತು.
ಅಂದು ಸಚಿವರಾಗಿದ್ದ ಅರ್ಜುನ್ ಸಿಂಗ್, ಎಲ್ಲಾ ಶಿಕ್ಷಣ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಮಿಡತೆಗಳಿಗೆ 'ವಿಶೇಷ ಮೀಸಲಾತಿ' ನೀಡಿದರು.   
ಕಿಕಖಿಎಆದ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ಇರುವೆಗೆ ಭಾರೀ ದಂಡ ವಿಧಿಸಲಾಯಿತು. ಅಷ್ಟು ದುಡ್ಡು ಇರುವೆಯ ಬಳಿ ಇರದ ಕಾರಣ, ಅದರ ಮನೆಯನ್ನು ಜಫ್ತಿ ಮಾಡಿ ಅದನ್ನು ಹೊರಗೆಸೆಯಲಾಯಿತು. ಸುದ್ದಿವಾಹಿನಿಗಳ ಸಮಕ್ಷಮದಲ್ಲಿ ಆ ಮನೆಯನ್ನು ಸಕಲ ಮರ್ಯಾದೆಗಳೊಂದಿಗೆ ಮಿಡತೆಗೆ ಕೊಡಲಾಯಿತು.
ಅರುಂಧತಿ ರಾಯ್ ಅದನ್ನು 'ನ್ಯಾಯದ ಗೆಲುವು' ಎಂದು ಕರೆದರೆ, ಲಾಲು ಪ್ರಸಾದ್ 'ಸಮಾಜವಾದದ ದಿಗ್ವಿಜಯ' ಎಂದು ಕೇಕೆ ಹಾಕಿದರು. ಸಿಪಿಎಮ್ ಅಂತೂ ಇದು 'ದೀನರ ಕ್ರಾಂತಿಕಾರಿ ಪುನರ್‌ಜಾಗೃತಿ' ಎಂದು ಕಣ್ಣು ಒರೆಸಿಕೊಂಡಿತು.
ಕೊನೆಯದಾಗಿ, ಭಾರತ ಸರ್ಕಾರ 'ವಿಶ್ವಸಂಸ್ಥೆಯ ಮಹಾಸಭೆ'ಯಲ್ಲಿ ಮಾತನಾಡಲು ಮಿಡತೆಗೆ ಆಹ್ವಾನ ನೀಡಿತು.
ಕೆಲವು ವರ್ಷಗಳ ನಂತರ....: ನೊಂದ ಇರುವೆ ಬಹಳ ವರ್ಷಗಳ ಹಿಂದೆಯೇ ಭಾರತ ಬಿಟ್ಟು, ಅಮೆರಿಕದಲ್ಲಿ ಶತಕೋಟಿ ಡಾಲರ್ ಬೆಲೆಯ ಕಂಪನಿಯೊಂದನ್ನು ಹುಟ್ಟುಹಾಕಿ ಹಾಯಾಗಿದೆ...
ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟರೂ ದಿನವೂ ನೂರಾರು ಮಿಡತೆಗಳು ಭಾರತದ ಯಾವುದೋ ಮೂಲೆಯಲ್ಲಿ ಉಪವಾಸ ಬಿದ್ದು ಸಾಯುತ್ತಲೇ ಇವೆ...
ಕೊನೆಗೆ: ಕಷ್ಟ ಪಟ್ಟು ದುಡಿಯುವ ಇರುವೆಗಳೆಲ್ಲ ಹೆದರಿ ಹೊರದೇಶಕ್ಕೆ ಓಡಿ ಹೋಗಿದ್ದರಿಂದ ಮತ್ತು ನಮ್ಮ ಸರ್ಕಾರ ಮಿಡತೆಗಳಿಗೆ ಮುದ್ದು ಮಾಡಿ ತುತ್ತು ತಿನಿಸುತ್ತಾ ಕುಳಿತಿದ್ದರಿಂದ, ಭಾರತವಿನ್ನೂ ಅಭಿವೃದ್ಧಿಯಾಗುತ್ತಿರುವ ದೇಶವಾಗಿಯೇ ಉಳಿದಿದೆ!!!
Courtesy Vishveshwar Bhat, Editor of Kannada Prabha - A Kannada dialy in Karnataka

Sunday, February 3, 2013

ಸುಮ್ಮನೆ ಹೀಗೊಂದು ಯೋಚನೆ...

ಸ್ಯಾಂಡಲ್‌ವುಡ್
ತಮ್ಮ ನಿರ್ಮಾಣ, ನಿರ್ದೇಶನದ 'ವಿಶ್ವರೂಪಂ' ಚಿತ್ರದ ಬಿಡುಗಡೆಗೆ ತಮಿಳುನಾಡಿನಲ್ಲಿ ತೊಂದರೆ ಮಾಡಿದ್ದಕ್ಕೆ ಬೇಸರಗೊಂಡಿರುವ ಕಮಲ್‌ಹಾಸನ್ ರಾಜ್ಯ ಬಿಟ್ಟು ಹೋಗುವ ಮಾತನ್ನಾಡಿದ್ದಾರೆ. ಒಂದುವೇಳೆ ಅದು ಸೀರಿಯಸ್ ಆಗಿ ಕಾರ್ಯಗತವಾಗುತ್ತದೆ ಎಂದಾದರೆ ಕಮಲ್‌ಹಾಸನ್ ಬರುವುದಿದ್ದರೆ, ಬೆಂಗಳೂರಿಗೆ ಬರಲಿ. ಹೇಗಿದ್ದರೂ ಕರ್ನಾಟಕದಲ್ಲಿ ತಮಿಳರ ಸಂಖ್ಯೆ ಹೆಚ್ಚಾಗಿಯೇ ಇರುವುದರಿಂದ ಕಮಲ್‌ಗೆ ಅಲ್ಲಿಗೂ ಇಲ್ಲಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣಿಸಲಾರದು. ಬೆಂಗಳೂರನ್ನು ರಿಟೈರ್ ಆದವರ ಪಾಲಿನ ಸ್ವರ್ಗ ಎನ್ನುತ್ತಾರೆ. ಆದರೆ, ಅದಕ್ಕೊಂದು ಅಪವಾದ ಎನ್ನುವಂತೆ ರಿಟೈರ್ ಆಗುವ ಮುಂಚೆಯೇ ಕಮಲ್ ಬರಲಿ. ಇಲ್ಲಿಯೇ ಇದ್ದುಕೊಂಡು, ಕನ್ನಡ ಸಿನಿಮಾಗಳನ್ನು ಮಾಡಲಿ. ಹೇಗಿದ್ರೂ ನಮ್ಮಲ್ಲಿ ಡಬ್ಬಿಂಗ್‌ಗೆ ಒನ್ ವೇ ಪಾಲಿಸಿ. ಅವುಗಳನ್ನು ತಮಿಳು, ತೆಲುಗಿಗೆ ಡಬ್ ಮಾಡುವುದು ಕಷ್ಟವೇನಲ್ಲ. ಅಲ್ಲದೆ, ಕರ್ನಾಟಕಕ್ಕೆ ಎಷ್ಟೋ ಜನ ತಮಿಳುನಾಡಿಂದ ಇಲ್ಲಿಗೆ ವಲಸೆ ಬಂದಿದ್ದಾರೆ, ಬರುತ್ತಿದ್ದಾರೆ, ಅದರಿಂದ ನಮ್ಮ ಕನ್ನಡಿಗರಿಗೆ ಸಮಸ್ಯೆ ಹೆಚ್ಚುತ್ತಿದೆ ಎಂಬ ಹಳೆಯ ಬೇಸರದ ನಡುವೆ ಕನ್ನಡಿಗರು ಹೆಮ್ಮೆಪಡುವಂಥ ಮತ್ತು ಖುಷಿ ಪಡುವಂಥ ಒಂದೇ ಒಂದು ವಲಸೆಯಾದರೂ ಆಗಲಿ. ಕಮಲ್ ಕರ್ನಾಟಕಕ್ಕೆ ಬರಲಿ.!
Courtesy: Harish (KP)

Friday, February 1, 2013

Nano ಕಥೆಗಳು


ಚಿಕ್ಕವನಿದ್ದಾಗ ಐಸ್‌ಕ್ಯಾಂಡಿ ತಿನ್ನುವ ಆಸೆಯಿಂದಾಗಿ, ಅಪ್ಪನ ಜೇಬಿನಿಂದ ದುಡ್ಡು ಕದಿಯಲು ಹೋಗಿದ್ದೆ. ಅಪ್ಪನ ತೂತು ಜೇಬಿನಿಂದ ನನ್ನ ಕೈ ಈಚೆಗೆ ತೂರಿಬಂತು.



ಕಾಲೇಜು ದಿನಗಳಲ್ಲಿ ಸಿಗರೇಟ್ ಸೇದಬೇಡ ಕ್ಯಾನ್ಸರ್ ಬರುತ್ತದೆಂದು ಸದಾ ಸಲಹೆ ನೀಡುತ್ತಿದ್ದ ಗೆಳೆಯನೇ ಇಂದು, ಬಾರಿನ ಮುಂದೆ ಬೀಡಾ ಅಂಗಡಿ ಇಟ್ಟಿದ್ದಾನೆ!



ಅವಳು ಅವನನ್ನು ಬಿಟ್ಟು ಹೋದಳು. ಅವನು ಬೇರೊಬ್ಬಳನ್ನು ಮದುವೆಯಾಗಿ, ಅವಳಿಗಿಂತಲೂ ಹೆಚ್ಚಾಗಿ ತನ್ನ ಹೆಂಡತಿಯನ್ನು ಪ್ರೀತಿಸಿದ, ಪ್ರೀತಿಯಿಂದ ನೋಡಿಕೊಂಡ ಅವಳ ಕೈ ಹಿಡಿದವನು ಸದಾ ಅವಳನ್ನು ಅನುಮಾನಿಸುತ್ತಿದ್ದ. ಅವಳಿಗೇ ಒಮ್ಮೆ ಅನ್ನಿಸಿತು, ಬಡವನಾದರೂ  ಅವನೇ ಪ್ರೀತಿಯಲ್ಲಿ ಶ್ರೀಮಂತ.


ಎದ್ದು ದೇವರ ಮುಖ ನೋಡಿ ದೇವರಿಗೆ ಕೈ ಮುಗಿಯೆಂದು. ಅಮ್ಮ ಕೂಗಿ ಹೇಳಿದ ಧ್ವನಿ ಕಿವಿಗೆ ಬಿದ್ದು, ಹಾಸಿಗೆಯಿಂದೆದ್ದವನ ಕಣ್ಣಿಗೆ ಗೋಡೆಯ ಮೇಲಿನ ಯಾವ ಫೋಟೋದಲ್ಲಿಯೂ ದೇವರು ಕಾಣಲಿಲ್ಲ. ಸೀದಾ ದೇವರ ಕೋಣೆಗೆ ಹೋಗಿ ದೇವರಿಗೆ ಪೂಜೆ ಮಾಡುತ್ತಿದ್ದ ಅಮ್ಮನ ಮುಖ ನೋಡಿ ಕೈ ಮುಗಿದೆ

Saturday, January 26, 2013

ಹರಿ-ಕಥೆ... (Courtesy: Hari Kannada Prabha)

ಒಂದು ದಿನ ಖೇಮು ಆಫೀಸ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ. ಮನೆ ಅಂಗಳದಲ್ಲಿನ ದೃಶ್ಯ ನೋಡಿ ಅವನಿಗೆ ಎದೆ ಒಡೆದುಹೋಗುವಂತಾಯಿತು. ತನ್ನ ಮನೆಯ ನಾಯಿ, ಪಕ್ಕದ ಮನೆಯ ಬೆಕ್ಕನ್ನು ಬಾಯಲ್ಲಿ ಕಚ್ಚಿ ಹಿಡಿದು ಎಳೆದಾಡುತ್ತಿತ್ತು. ಖೇಮು ಓಡಿ ಬಂದವನೇ ತನ್ನ ನಾಯಿಯನ್ನು ಹೊಡೆದು ಬೆಕ್ಕನ್ನು ಬಿಡಿಸಿಕೊಂಡ. ಮುಟ್ಟಿನೋಡಿದರೆ ಬೆಕ್ಕು ಸತ್ತು ಹೋಗಿತ್ತು. ಖೇಮುಗೆ ಗಾಬರಿ. ಮೊದಲೇ ಪಕ್ಕದ ಮನೆಯವನು ಜಗಳಗಂಟ. ಅಲ್ಲದೆ ರಿಟೈರ್ಡ್ ಮಿಲಿಟರಿ ಮ್ಯಾನ್ ಬೇರೆ. 24 ಗಂಟೆ ಕೈಯಲ್ಲಿ ಬಂದೂಕು ಹಿಡಕೊಂಡು ಮಾತಾಡಿದ್ರೆ 'ಸುಟ್ಟುಬಿಡ್ತೀನಿ' ಅಂತಿರ್ತಾನೆ. ನನ್ನ ನಾಯಿ ಅವನ ಬೆಕ್ಕನ್ನು ಸಾಯಿಸಿದೆ ಎಂದು ಗೊತ್ತಾದರೆ ನನ್ನನ್ನೂ ಸಾಯಿಸಿಬಿಡುತ್ತಾನೆ ಎಂದು ಕಂಗಾಲಾದ. ನಂತರ ಕೊಂಚ ಯೋಚಿಸಿ ಆ ಸತ್ತ ಬೆಕ್ಕಿನ ಮರಿಯನ್ನು ತೆಗೆದುಕೊಂಡು ಬಾತ್‌ರೂಮಿಗೆ ಹೋಗಿ ಅದನ್ನು ಚೆನ್ನಾಗಿ ತೊಳೆದು, ಮೈಮೇಲಿನ ಮಣ್ಣು ಧೂಳು ಕ್ಲೀನ್ ಮಾಡಿ ಕತ್ತಲಾಗುವವರೆಗೂ ಕಾದು ಮೆಲ್ಲನೆ ತೆಗೆದುಕೊಂಡು ಹೋಗಿ ಅದನ್ನು ಪಕ್ಕದಮನೆಯ ಅಂಗಳದಲ್ಲಿದ್ದ ಆ ಬೆಕ್ಕಿನ ಗೂಡಿನ ಒಳಗೆ ಇಟ್ಟು ಬಂದುಬಿಟ್ಟ. ಮಿಲಿಟರಿ ಮ್ಯಾನ್ ನೋಡಿದರೆ ಬೆಕ್ಕು ತನ್ನ ಗೂಡಿನಲ್ಲೇ ಸತ್ತುಹೋಗಿದೆ ಎಂದುಕೊಳ್ಳುತ್ತಾನೆ ಎಂಬ ಪ್ಲ್ಯಾನ್ ಖೇಮುನದ್ದು. ಸರಿ ಬೆಳಗ್ಗೆ ಕಾತರದಿಂದ ಬೆಳಗ್ಗೆ ಕಾತರದಿಂದ ಸ್ವಲ್ಪ ಮುಂಚೆಯೇ ಎದ್ದು ಬಂದು ಬಾಲ್ಕನಿಯಲ್ಲಿ ನಿಂತು ಆಚೀಚೆ ನೋಡಿದ ಖೇಮು. ಅದೇ ಸಮಯಕ್ಕೆ ಹೊರಗೆ ಬಂದ ಮಿಲಿಟರಿ ಮ್ಯಾನ್ ಕೇಳಿದ 'ಖೇಮು, ನಿಂಗೊಂದ್ ವಿಷ್ಯ ಗೊತ್ತಾಯ್ತಾ, ನಮ್ಮ ಬೆಕ್ಕಿನ ಮರಿ ಸತ್ತು ಹೋಯ್ತು'. ಖೇಮುಗೆ ನಾಲಗೆ ಒಣಗಿತು. ಹಾ, ಓ...ಛೆ..., ಹೌದಾ? ಎಂದು ತಡವರಿಸಿದ. ಅದಕ್ಕೆ ಮಿಲಿಟರಿ ಮ್ಯಾನ್ ಹೇಳಿದ 'ಹೌದು, ಬೆಕ್ಕಿಗೆ ಜ್ವರ ಬಂದು ಮೊನ್ನೆ ರಾತ್ರಿ ಸತ್ತುಹೋಯ್ತು, ಆದ್ರೆ ವಿಚಿತ್ರ ಅಂದ್ರೆ, ಅದನ್ನ ಮನೆ ಪಕ್ಕದ ಗುಂಡೀಲಿ ಹೂತು  ಹಾಕಿದ್ದೆ. ಆದ್ರೆ ಯಾವನೋ ತಲೆಕೆಟ್ಟೋನು, ಅದನ್ನ ಗುಂಡಿಯಿಂದ ತೆಗೆದು, ಅದಕ್ಕೆ ಸ್ನಾನ ಮಾಡಿಸಿ, ಮೈ ಒರೆಸಿ ಮತ್ತೆ ವಾಪಸ್ ತಗೊಂಡ್‌ಬಂದು ಅದರ ಗೂಡಲ್ಲೇ ಇಟ್ಟು ಹೋಗಿದ್ದಾನೆ....!