Thursday, August 1, 2013

ಸರಕಾರಗಳ ಮಧ್ಯೆ ಸಿಕ್ಕಿ ನಲುಗುತ್ತಿರುವ 'ಪುಣ್ಯಕೋಟಿ' ಕಥೆ...!

ನಿಮಗೆ ಪುಣ್ಯಕೋಟಿ ಕಥೆ ಗೊತ್ತೇ ಇದೆ ಅನ್ಕೊತಿನಿ...
ಸರಕಾರೀ ಶಾಲೆಯ ೮ ನೆ ತರಗತಿಯ ಪಠ್ಯದಲ್ಲಿ ಈ ಹುಲಿ ಮತ್ತು ಗೋವಿನ ಕಥೆ ಬರುತ್ತೆ. ಆದರೆ ರಾಜ್ಯದಲ್ಲಿ ಸರಕಾರಗಳು ಬದಲಾದ ಹಾಗೆ ಈ ಹಾಡಿನ ಕಥೆಯ ತಿರುಳು ಬದಲಾಗುತ್ತಿದೆ..!
ಬಿ. ಜೆ. ಪಿ. ಸರಕಾರದ ಅವಧಿಯಲ್ಲಿ ಗೋ ಮಾಂಸ ಸೇವನೆ ತಪ್ಪು ಎಂಬುದನ್ನು ಸಾರುವ ಸಲುವಾಗಿ ಕಥೆಯ ಅಂತ್ಯದಲ್ಲಿ ಬದಲಾವಣೆ ಮಾಡಿತ್ತು.. 'ಹಸುವಿನ ಸತ್ಯಸಂಧತೆ ಮೆಚ್ಚಿ ಹುಲಿ ಇನ್ನುಮುಂದೆ ನಾನು ಮಾಂಸ ತಿನ್ನುವುದಿಲ್ಲ ಎಂದು ಶಪಥ ಸ್ವೀಕರಿಸುವುದು' ಇದು ಆ ಹಾಡಿನಲ್ಲಾದ ಬದಲಾವಣೆ...
ಆದರೆ ಈಗ ಸರಕಾರ ಬದಲಾಗಿದೆ..
ಹಾಗಾಗಿ ಹಾಡು ಬದಲಾಗಿದೆ..!
ಆ ಹುಲಿ ಹಸುವನ್ನು ಸುಮ್ಮನೆ ಬಿಟ್ಟಾಗ ಗೋಪಾಲಕ ಹುಲಿಯ ಉಪಟಳವನ್ನು ನಿಗ್ರಹಿಸುವದಕ್ಕಾಗಿ ಅದನ್ನು ಗುಂಡಿಕ್ಕಿ ಕೊಲ್ತಾನಂತೆ. ಅದು ಸಾಯುತ್ತಾ, ಸಾಯುತ್ತಾ ತನ್ನ ಮರಿಗೆ ಹೇಳುತ್ತಂತೆ, ನೋಡು ಮರಿ ನೀನು ಅನಾಥನಾದೆ, ಬೇಟೆ ಆಡುವುದು ನಮ್ಮ ಜನ್ಮ ಸಿಧ್ಧ ಹಕ್ಕು ಅದನ್ನು ಯಾವತ್ತೂ ಮರೆಯಬಾರದು ಅಂತ..
ಅದಕ್ಕೆ ಮರಿ ಹೇಳುತ್ತಂತೆ, ಅಮ್ಮ ಹಾಗಾದ್ರೆ ದೇವರು ನಮ್ಮನ್ಯಾಕೆ ಹುಲ್ಲು ತಿನ್ನುವ ಪ್ರಾಣಿಯನ್ನಾಗಿ ಸೃಷ್ಟಿಸಲಿಲ್ಲ ಅಂತಾ...?!
.
ಕಾಂಗ್ರೆಸ್ಸ್ ಗೆ ಒಂದು ಪ್ರಶ್ನೆ... ಗೋಪಾಲಕ ಅಂದ್ರೆ ಗೋವು ಕಾಯೋನು ಅಂತ ಅರ್ಥ. ಅವನು ಬೇಟೆಗಾರ ಹೇಗಾದ ಅಂತ ಸ್ವಲ್ಪ ದಯವಿಟ್ಟು ತಿಳಿಸಿ ಹೇಳಿ...!

No comments:

Post a Comment