Monday, November 7, 2016

ಪಾಪಗ್ರಸ್ತ ಮಹಾನಗರ - ಹುಬ್ಬಳ್ಳಿ

ಹುಬ್ಬಳ್ಳಿಯೊಂದಿಗೆ ನನ್ನದು ಸುಮಾರು ೨೦ ವರ್ಷಗಳ ಒಡನಾಟ. ಅಮ್ಮನೂ ಓದಿದ್ದು ಬೆಳೆದಿದ್ದು ಅಲ್ಲೇ. ನನ್ನ ಊರಿನಿಂದ ಸುಮಾರು ೧೨೦ ಕಿಮಿ ದೂರ. ಉತ್ತರ ಕರ್ನಾಟಕದಲ್ಲಿ ಬಹು ದೊಡ್ಡ ವಾಣಿಜ್ಯ ನಗರಿ, ಗಂಡು ಮೆಟ್ಟಿದ ನಾಡು ಅಂತೆಲ್ಲ ಕರೆಸಿಕೊಳ್ಳುವ ಆ ಊರಿನಲ್ಲಿ ಅಸಲಿಗೆ ಗಂಡಸರೇ ಇಲ್ಲವೇನೋ ಅನ್ನಿಸುವಷ್ಟು ನಿಸ್ತೇಜ ಜನ. ರಾಜಕೀಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬಹು ದೊಡ್ಡ ಪಕ್ಷಗಳು. ಜನರೂ ಅಷ್ಟೇ ಮತ್ತೇ ಅವರವರನ್ನೇ ಆರಿಸುತ್ತ ಬಂದಿದ್ದಾರೆ. ನಾನು ಮೂಲತಹ ಬಿಜೆಪಿಯ ಕಟ್ಟಾ ಬೆಂಬಲಿಗನಾದರೂ ಹುಬ್ಬಳ್ಳಿ ಬಿಜೆಪಿಯನ್ನು ಕಾಂಗ್ರೆಸಿನಷ್ಟೇ ವೀರೊಧಿಸುತ್ತೇನೆ. ಧೂಳು, ಹಾಳು ಗುಂಡಿಗಳು ಬಿದ್ದ ರಸ್ತೆಗಳು, ಎಲ್ಲೆಲ್ಲೂ ಕೊಳಚೆ ಪ್ರದೇಶಗಳು, ಕಿರಿದಾದ ರಸ್ತೆಗಳು ಅಭಿವೃದ್ದಿ ಎಂಬ ಅಂಶವನ್ನೇ ಮರೆತ ಮಹಾನಗರ ಪಾಲಿಕೆ ಇವು ಆ ಊರಿನ ವಿಶೇಷತೆಗಳು. ಇದ್ದುದರಲ್ಲಿ ಧಾರವಾಡ ಸ್ವಲ್ಪ ಪರವಾಗಿಲ್ಲ. ಕೇವಲ ೨೦ ಕಿಮಿ ಅಂತರವಿದ್ಡರೂ ಧಾರವಾಡದ್ದು ಸ್ವಲ್ಪ ತಂಪಾದ, ಅರೆ ಮಲೆನಾಡು ಹವಾಗುಣ. ಜನರೂ ಅಷ್ಟೇ, ಸ್ವಲ್ಪ ವಿವೇಚನೆ, ನಾಗರಿಕತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ೧೯೯೩ ರಲ್ಲಿ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಚಿತ್ರೀಕರಣ ನಡೆದ ಜಾಗ ಕಿತ್ತೂರು ಚೆನ್ನಮ್ಮ ವೃತ್ತ ಟ್ರಾಫಿಕ್ ಎಂಬ ಬೆಂಕಿಗೆ ಬಿದ್ದು ಎಂದೋ ಉರಿದು ಹೋಗಿದೆ. ಸಾಲದ್ದಕ್ಕೆ ಬಿ ಆರ್ ಟಿ ಎಸ್ ಎಂಬ ಉಪಯೋಗವಿಲ್ಲದ, ದೂರದೃಷ್ಟಿ ಇಲ್ಲದ, ಆರ್ಥಿಕವಾಗಿ ಹೊರೆಯಾದ ಯೋಜನೆ. ಹುಬ್ಬಳ್ಳಿ ಜನರೇನೋ ಅದು ಬೆಂಗಳೂರಿನ ಮೆಟ್ರೊ ಯೋಜನೆಯಂತೆಯೇ ಬಹು ದೊಡ್ಡ ಯೋಜನೆ, ಅದರಿಂದ ನಮ್ಮ ನಗರದ ವಾಹನ ಸಂದಣಿ ಎಲ್ಲ ಕಡಿಮೆ ಆಗೇ ಆಗುತ್ತದೆ ಎಂಬ ಹುಚ್ಚು ಭ್ರಮೆಯಲ್ಲಿದ್ದಾರೆ. ಇಂಜನೀಯರಿಂಗ್ ಅಲ್ಲಿ ಎರಡು ಪದವಿ ಪಡೆದ ನಾನೇ ಇದನ್ನು ಹೇಳಬೇಕು ಅಂತೇನೂ ಇಲ್ಲಾ. ಸರಿಯಾಗಿ ಕಾಳಜಿ ಇರುವ ಯಾವುದೇ ಒಬ್ಬ ಸ್ಥಳಿಯ ನಾಗರೀಕನೂ ಇದನ್ನು ಹೇಳಿಯಾನು. ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಸರಿಯಾದ ಪಾರ್ಕ್ ಗಳು ಉಹುಂ, ಯಾವದೂ ಸರಿ ಇಲ್ಲಾ. ರಸ್ತೆ ಮಾರ್ಗವಾಗಿ ಒಮ್ಮೆ ಹುಬ್ಬಳ್ಳಿಯ ಬಸ್ ನಿಲ್ದಾಣಕ್ಕೆ ಹೋಗಿ ಬನ್ನಿ, ನಾನು ಹೇಳುವ ಎಲ್ಲ ಸಮಸ್ಯೆಗಳು ನಿಮ್ಮ ಕಣ್ಣಿಗೆ ಕಟ್ಟಿಲ್ಲವಾದರೆ ನನ್ನಾಣೆ. ಭಾರತ ಸರಕಾರ ಸ್ಮಾರ್ಟ್ ಸಿಟಿ ರೂಪಿಸುವ ಮುಂಚೆ ಎಲ್ಲ ನಗರದ ಸ್ಥಳಿಯ ನಾಗರಿಕರಿಗೆ ಆನ್ ಲೈನ್ ಮೂಲಕ ಅಭಿಪ್ರಾಯ ತಿಳಿಸುವಂತೆ, ಸಲಹೆ ಸೂಚನೆ ಕೊಡುವಂತೆ ಕೇಳಿ ಕೊಂಡಿತ್ತು. ಆದರೆ ಜನರು ಸ್ಪಂದಿಸದೆ ಇರುವ ಕಾರಣಕ್ಕೆ ಮೊದಲ ಪಟ್ಟಿ ಬಿಡುಗಡೆ ಆಗಾಗ ಹುಬ್ಬಳ್ಳಿ ಧಾರವಾಡದ ಹೆಸರು ಕೈ ತಪ್ಪಿ ಹೋಗಿತ್ತು. ಇಂತಹ ಮೂಲಭೂತ ಸೌಕರ್ಯಗಳೇ ಇಲ್ಲದ ನಗರಕ್ಕೆ ಯಾವ ಉದ್ಯಮಿ ತಾನೇ ತನ್ನ ಸಾಮ್ರಾಜ್ಯ ಕಟ್ಟಲು ಬರುತ್ತಾನೆ. ಮಾತನಾಡಿಸಲು ಹೋದರೆ, ಅಡಳಿತದಲ್ಲಿ ಇರುವ ಯಾರನ್ನೇ ದೂರುವುದು ಬಿಟ್ಟರೆ ಇಲ್ಲಿಯ ಜನ ಏನೂ ಮಾಡುವುದಿಲ್ಲ. ನನ್ನ ಪ್ರಕಾರ ತಪ್ಪು ಜನರದ್ದೇ. ನಮ್ಮ ಮನೆ, ನಮ್ಮ ಕಾಲನಿ ಅಷ್ಟೇ ಆದರೆ ಸಾಕೇ!? ನಮ್ಮ ನಗರ ಎನ್ನುವ ಕಾಳಜಿಯೂ ಇರಬೇಕಲ್ಲವೇ!!? ಸುಮಾರು ವರ್ಷಗಳ ನಂತರ ಭಾರತ ಸರಕಾರದ ಪರಿಶ್ರಮದಿಂದ ಲಭಿಸಿರುವ ಐ ಐ ಟಿ ಯನ್ನೇ ಬಹು ದೊಡ್ದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ ಸಂಸದರನ್ನು ಇಲ್ಲಿಯ ಜನ ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದಾರೆ. ಕೆ ಎಲ್ ಇ, ಎಸ್ ಡಿ ಎಂ ನಂತಹ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಇದ್ದರೂ ಕಾಳಜಿ ತೋರಿಸುವ ಇರಾದೆ ಯಾರಿಗೂ ಇಲ್ಲ. ಕೇವಲ ತಾವು ಆಯಿತು ತಮ್ಮ ಉದ್ದಿಮೆ ಆಯಿತು ಎನ್ನುವ ಬಾಂಬೆ ಮಾರವಡಿಗಳೂ ಅಷ್ಟೇ. ಇಲ್ಲಿಯ ಜನರೇ ಇಷ್ಟು ಜಿಡ್ಡುಗಟ್ಟಿರುವ ಮನೋಭಾವ ಹೊಂದಿರುವಾಗ ಉತ್ತರ ಭಾರತದ ಆ ಸಮುದಾಯದಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ನಿತ್ಯವೂ ವಲಸೆ ಬರುವ ಗ್ರಾಮೀಣ ಭಾಗದ ಜನರಿಗೂ ಸ್ವಚ್ಛತೆಯ ಅರಿವು ಇಲ್ಲ. ಸ್ಥಳಿಯರಿಗೂ ಇಲ್ಲ. ಇದೇ ಮನೋಭಾವ ಮುಂದುವರೆದರೆ ಮುಂದಿನ ೨೦ ವರ್ಷಗಳು ಕಳೆದರೂ ಈ ಪಾಪಗ್ರಸ್ತ ನಗರದ ಪರಿಸ್ಥಿತಿ ಇಷ್ಟೇ.

ಇನ್ನಾದರೂ ಜನ ಎಚ್ಚೇತ್ತುಕೊಳ್ಳಲಿ ಎಂಬುದಷ್ಟೇ ಈ ಲೇಖನದ ಆಶಯ.

Saturday, November 5, 2016

Bihar vs Karnataka

Few hours back in weeknd party, we were on side of highway. Police came and asked us, are you guys thinking is this is Bihar?

I wish that the same question should not ask Bihar police in Bihar, are you guys thinking is this is Karnataka!?? 😢

Friday, October 28, 2016

Pataki less Deepavali is like Mysorepak without Sugar

Watching the so called fake environment protectors aka intellectuals from last week on social media. They will keep close their eyes when they wish to burn effigy of our Prime Minister. Someone sending a message on Prime Minister official letter head that please avoid crackers on Diwali. Insane! As soon received one never moves to cross check the genuinity of the letter, they keep start to forward the same to their contact list.

The culture that we followed since from ages is important and that is ultimate for us. We wish alwys to celebrate our hindu festivals as celebrated previously. Thats it. In fact, in India the more crackers will be burnt after elections, after winning a cricket match, though these morons dont open their mouths. Every individuals thinks that just spreading such dramatic environmental concern messages is as they feel smart.

So just neglect such videos, images may be via whatsapp, facebook and other social networks. You burn more and more crackers and celebrate the biggest festival of our great hinduism.

Dhanyavad
Jai Shriram. 

Thursday, October 13, 2016

ನೀವ್ ಬೇಕಾದ್ರೆ ರಸಿಕ ಅನ್ನಿ... ಅದರೂ ಈ ಪೋಸ್ಟ್

ಹೋ ಹೋ ಹೋ ಹೇ ಹೇ ಹೇ....
ಲಾ ಲಲ ಲಲ ಲಾ
ತಂದಾನ ತಂದನಾ

ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತನ್ದ
ಮಕರಂದ ತುಂಬಿ ಅಧರಾನ ತಂದ
ನನ್ನನು ತಂದ ರುಚಿ ನೋಡು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ ಪ

ಚಂದಮಾಮನಿಂದ ಹೊಳಪನು ತಂದ
ಬಾಳೆ ದಿಂಡಿನಿಂದ ನುಣುಪನು ತಂದ
ಅಂದ ಹೈ ಅಂದ ಹೈ
ಆಂದ ಚಂದ ಹೊರುವ ಕಂಬದ ಜೋಡಿಗೆ
ಮಿಂಚಿರಿ ಎಂದ
ಹಂಸದಿಂದ ಕೊಂಚ ನಡಿಗೆಯ ತಂದ
ನವಿಲಿಂದ ಕೊಂಚ ನಾಟ್ಯವ ತಂದ

ನಯವೊ ಹೈ ಲಯವೊ ಹೈ
ನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ
ತಂಗಾಳಿಯಿಂದ ಸ್ನೇಹಾನ ತಂದ
ಲತೆ ಬಳ್ಳಿ ಇಂದ ಸಿಗ್ಗನು ತಂದ
ಸಿಗ್ಗನು ಇವಳ ನಡುವಾಗು ಎಂದ
ನಡುವನ್ನು ಅಳಿಸಿ ಎದೆ ಭಾರ ತಂದ
ನನ್ನನ್ನು ಲತೆಗೆ ಮರವಾಗು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ ೧

ಗಂಧ ತಂದನೊ ಗಮರುಗದಿಂದ
ರತಿಯ ತಂದನೊ ಅವನುರದಿಂದ
ಭ್ರಮರ ಹೈ ಅಮರ ಹೈ ಭ್ರಮರ ಅಮರ
ಕಂಪನ ಕಡಲ ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ
ಬಾನಿನಿಂದ ಏಕಾಂತವ ತಂದ

ಒಲವು ಹಾ ಚೆಲುವು ಹಾ
ಒಲವು ಚೆಲುವು ಕೂಡೋ ಕಲೆಗೆ
ಘರ್ಷಣೆ ಆಕರ್ಷಣೆ ತಂದ

ಕರಿ ಮೋಡದಿಂದ ಮುಂಗುರುಳ ತಂದ
ಕೋಲ್ಮಿಂಚಿನಿಂದ ರತಿ ನೋಟ ತಂದ
ಜಲಧಾರೆಯಿಂದ ಒಲವನ್ನು ತಂದ
ಒಲವನ್ನು ಓಡೊ ನದಿಯಾಗು ಎಂದ
ನನ್ನನು ನದಿಗೆ ಕಡಲಾಗು ಎಂದ ೨

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ

Wednesday, October 12, 2016

Let's starts once again

Since its 2014 August. I completely stopped writing in this blog. Now it's time to start this once again. It doesn't mean that I have enough free time. I feel the people who listen me before they completely stopped listening me now. So I decided to talk myself through this blog. That's why I re-installed this blogger app from Play Store. No I don't want to follow this blog by anyone. Because I have enough followers in Facebook and Twitter.

And also I promised myself that at least twice in a week I will open this app and something I will write here so that I can satisfied my own soul just because of myself.

Tuesday, August 19, 2014

ಭಾರತ್ ಸ್ಟೋರ್ಸ್....

ಭಾರತ್ ಸ್ಟೋರ್ಸ್....
.
ಪ್ರಶಸ್ತಿ ಗೆದ್ದ ಪ್ರಾದೇಶಿಕ ಚಿತ್ರಗಳನ್ನು ಪ್ರಸಾರ ಮಾಡುವ ಪರಿಪಾಠವನ್ನು ದೂರದರ್ಶನ ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ನಿನ್ನೆ ರಾತ್ರಿ ಸುಮಾರು ಹತ್ತು ಗಂಟೆಯ ಹೊತ್ತಿಗೆ ಟಿವಿಯ ಚಾನಲ್ ಗಳ ಜಾಲಾಟದಲ್ಲಿ ಸಿಕ್ಕಿತು ಈ ಸಿನೆಮಾ. ಸಿಕ್ಕ ತಕ್ಷಣವೇ ನೆನಪಾಗಿದ್ದು ಅಂದ್ರೆ "ಅರೇ, ೨೦೧೨ ರಲ್ಲಿ ಪಿ. ಶೇಷಾದ್ರಿ ನಿರ್ದೇಶಿಸಿದ ಸಿನಿಮಾ ಅಲ್ವಾ ಇದು ಅಂತ". ಸರಿ ಸುಮಾರು ೨ ಘಂಟೆಗಳ ವರೆಗೆ ಸರಾಗವಾಗಿ ನೋಡಿಸಿಕೊಂಡು ಹೊಯ್ತು. ಹಿರಿಯನಟ ದತ್ತಾತ್ರೇಯ ಅವರ ಅದ್ಭುತ ನಟನೆಯ ಕಾರಣವು ಇರಬಹುದು. ಮೂಲತಃ ತೀವ್ರ ಬಲಪಂಥೀಯನಾದರೂ ಕೊನೆಯಲ್ಲಿ ನಮ್ಮ ದೇಶದಲ್ಲಿ FDI ಬೇಕೋ, ಬೇಡವೋ ಎನ್ನುವ ದ್ವಂದ್ವ ನನ್ನಲ್ಲಿ ಹಾಗೆಯೆ ಉಳಿದಿದ್ದು ಆಶ್ಚರ್ಯ! ಆದರೆ ಒಂದು ನಿರ್ದಿಷ್ಟವಾದ ಅಭಿಮತಕ್ಕೆ ಬಂದಿದ್ದು ಅಂದರೆ, ಗೋವಿಂದ ಶೆಟ್ಟರ ದಿನಸಿ ಅಂಗಡಿ ದಿವಾಳಿಯಗಲೂ FDI ಒಂದೇ ಕಾರಣವಲ್ಲ, ಬದಲಿಗೆ ಅದರಲ್ಲಿ ಅವರ ಮಗ ಬಾಲಜಿಯ ಬೇಜವಬ್ದಾರಿತನವೂ ಇದೆ ಅಂತ... ನಿಮ್ಮ ದಿನಸಿ ಅಂಗಡಿಯಲ್ಲಿ coupons ತೊಗೊಳ್ತೀರಾ? ಅಂತ ಕರ್ನಲ್ ಅವರ ಸೊಸೆ ಕೇಳಿದ್ದು, ನಿಮ್ಮಲ್ಲಿ dark fantasy ಚಾಕೋಲೆಟಿದೆಯ? ಅಂತ ಒಬ್ಬ ಬಾಲಕ ಕೇಳಿದ್ದು, ನಮ್ಮಮ್ಮ ಪ್ಯಾಕೆಟ್ ಇಲ್ದೇ ಇರೋ ಸ್ವೀಟ್ಸ್ ಎಲ್ಲ ತಿನ್ಬೇಡ ಅಂತ ಹೇಳಿದಾರೆ ಅನ್ನುವ ಬಾಲಕನ ಉತ್ತರದಂತಹ ದೃಶ್ಯಗಳನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದು ವಿಶೇಷ.
.
any how , ನಿರ್ದೇಶಕ ಪಿ. ಶೇಶಾದ್ರಿಯವರಿಗೆ ನನ್ನ ಕಡೆಯಿಂದ ಒಂದು hatsoff!!
.
ಚಿತ್ರದ ಪ್ರತಿ ಸಿಕ್ಕರೆ ನೀವು ನೋಡಿ..

Friday, September 13, 2013

ಯಾಕೋ, ನಮ್ಮಣ್ಣ ನೆನಪಾದ...

ಎಲ್ಲೋ ಜೋಗಪ್ಪ ನಿನ್ನ ಅರಮನೆ?
ಮರದೊಳಡಗಿದ ಬೆಂಕಿಯಂತೆ
ಎಲ್ಲೋ ಅಡಗಿದೆ ಬೇಸರ
ಏನೋ ತೀಡಲು ಏನೋ ಕಾಡಲು
ಹೊತ್ತಿ ಉರಿವುದು ಕಾತರ..!

ಅಡಿಗರ ಕವಿತೆಯನ್ನು ಎದೆಗಿಳಿಸಿಕೊಂಡು ಬೆರಳಲ್ಲಿ ಸಿಗರೇಟು ತುದಿಯ ನಿಗಿನಿಗಿ ಕೆಂಡ ಸವರುತ್ತಾ ಕುಳಿತಿದ್ದೆ. ಈ ಘಟನೆ ನಡೆದಿದ್ದು ಈಗ್ಗೆ ಹದಿನೇಳು ವರ್ಷಗಳ ಹಿಂದೆ.

'ಏನಾಗಿದೆ ನಿಂಗೆ?' ಆಕೆ ನನ್ನೆಡೆಗೆ ಕಾಫಿ ಸರಿಸುತ್ತಾ ಕೇಳಿದಳು. ಉತ್ತರಿಸಬೇಕೆನಿಸಲಿಲ್ಲ. ಆಕೆ ತನ್ನ ಹರಿದು ಹೋದ ತಾಳಿಸರಕ್ಕೆ ಹೊಸ ಪಿನ್ನು ಹಾಕಿ ಸರಿಪಡಿಸಿಕೊಳ್ಳತೊಡಗಿದಳು. ಅದನ್ನಾಕೆ ಕಟ್ಟಿಸಿಕೊಂಡು ಆವತ್ತಿಗೆ ಹದಿನೇಳು ವರ್ಷಗಳಾಗಿದ್ದವು. ಅದು ಹರಿದಿದೆ, ತುಂಡಾಗಿದೆ, ಸವೆದಿದೆ, ಅಕ್ಕಸಾಲಿಗರ ಮನೆಗೆ ಹೋಗಿ ಬಂದಿದೆ, ಹಠಾತ್ತನೆ ಕಳೆದು ಹೋಗಿ ಧಾವಂತ ಹೆಚ್ಚಿಸಿದೆ, ಬಚ್ಚಲು ಮನೆಯ ಗೂಡಿನಲ್ಲಿ ಪ್ರತ್ಯಕ್ಷವಾಗಿ ನೆಮ್ಮದಿ ತಂದಿದೆ.

ಎರಡು ಬಂಗಾರದ ಬಟ್ಟಿನ, ಕರಿಮಣಿ ಸರದ ತುದಿಯ ತಾಳಿ!

ಅದನ್ನು ಕಟ್ಟಿದ ಮನುಷ್ಯನನ್ನು ನೋಡಿಕೊಂಡಷ್ಟು ಚೆನ್ನಾಗಿ, ಆಕೆ ತಾಳಿಯನ್ನು ನೋಡಿಕೊಂಡಿಲ್ಲ. ಅದಕ್ಕೆ ಬಂಗಾರದ ಎಳೆ ಇರಲಿಲ್ಲವೆಂಬ ಕಾರಣವೋ ಮತ್ತೇನು ಅಸಡ್ಡೆಯೋ? ತಾಳಿಯೆಂದರೆ ಆಕೆಗೆ ಅಂಥ ಮಮಕಾರವೇನೋ ಇದ್ದಂತಿಲ್ಲ. ಬಳೆ, ಓಲೆ, ಉಂಗುರಗಳಾದರೂ ಅಷ್ಟೆ. ಈ ಮೂವತ್ತ್ನಾಲ್ಕು ವರ್ಷಗಳಲ್ಲಿ ಆಕೆ ಅಂಥ ಮುಚ್ಚಟೆಪಟ್ಟು ಧರಿಸಿದ್ದು ನಾನು ನೋಡಿಲ್ಲ. ಆಕೆಯ ಕಾಲುಂಗುರ ಯಾವಾಗ ಮತ್ತು ಎಲ್ಲಿ ಕಳೆದು ಹೋಯಿತೋ, ಬಹುಶಃ ಆಕೆಗೂ ನೆನಪಿರಲಿಕ್ಕಿಲ್ಲ.

''ಇವತ್ತು ಆಫೀಸಿಗೆ ಹೋಗೋ ವಿಚಾರ ಇಲ್ವಾ ನಿಂಗೆ?'' ಅಂದಳು.

ಉತ್ತರಿಸಲಿಲ್ಲ. 'ನೀನು' ಅಂತಾಳೆ. ಮಕ್ಕಳು ಅಥವಾ ಮನೆಗೆ ಬಂದವರು ಎದುರಿಗಿದ್ದರೆ 'ನೀವು' ಅಂತಾಳೆ. ಈ ಏಕವಚನ, ಬಹುವಚನ, ಹಿತವಚನ ಇತ್ಯಾದಿಗಳೆಲ್ಲ ಮೂವತ್ತ್ನಾಲ್ಕು ವರ್ಷಗಳ ವನವಾಸದ ಮೌನದಲ್ಲಿ ಅರ್ಥ ಕಳೆದುಕೊಂಡಿವೆ. ಮೊದಲು ನಮ್ಮಿಬ್ಬರ ನಡುವೆ ಉರ್ದು ಇತ್ತು. ಈಗ ಮಕ್ಕಳಿದ್ದಾರೆ.

ಲಲಿತೆಯ ಬಗ್ಗೆ ಅಟ್‌ಲೀಸ್ಟ್ ಈ 'ಖಾಸ್‌ಬಾತ್‌' ಅಂಕಣದಲ್ಲಿ ಯಾವತ್ತೂ ಬರೆಯಬಾರದು ಅಂದುಕೊಂಡಿದ್ದೆ. ನಿನ್ನ ಬಗ್ಗೆ, ಗೆಳೆಯರ ಬಗ್ಗೆ, ಆಗ ತಾಯಿಯ ಬಗ್ಗೆ ಅಷ್ಟೊಂದು ಬರ‍್ಕೋತಿಯಾ. ಹೆಂಡತಿಯ ಬಗ್ಗೆ ಯಾಕೆ ಬರೆಯಲ್ಲ? ಅಂತ ಕೇಳಿದವರಿದ್ದಾರೆ. ಮುಂದೆ ಯಾವತ್ತಾದರೂ ನನ್ನ ಆತ್ಮವೃತ್ತಾಂತವೆಂಬ ಅತಿ ಭಯಾನಕ ಪುಸ್ತಕವನ್ನು ನಾನು ಬರೆದದ್ದೇ ಆದರೆ.. ಅದರಲ್ಲೊಂದು ತಣ್ಣನೆಯ, ಮಧುರವಾದ, ಆಪ್ಯಾಯತೆಯ ಅಧ್ಯಾಯವಿರುತ್ತದೆ. ಅದರ ಹೆಸರು ಲಲಿತೆ! ಒಂದು ಭೂಮಿ ತೂಕದ ವ್ಯಕ್ತಿತ್ವ ನನ್ನನ್ನು ಸಹಿಸಿಕೊಂಡಿದೆ, ಭರಿಸಿಕೊಂಡಿದೆ, ಆವರಿಸಿಕೊಂಡಿದೆ- ಅದರ ಹೆಸರು ಲಲಿತೆ!

ಅವತ್ತು ರಾತ್ರಿ ನಡೆದದ್ದನ್ನು ನಾನು ನಿಮಗೆ ಹೇಳಬೇಕು. ನಾನು ಪ್ರೆಸ್ ಕ್ಲಬ್ಬಿನಲ್ಲಿ ಕುಳಿತು ಆರನೇ ಲಾರ್ಜು ಕುಡಿಯುತ್ತಿದ್ದೆ. ಕೆಲವೇ ಗಂಟೆಗಳಿಗೆ ಮುಂಚೆ ಸುಮಾರು ಹತ್ತು ಸಾವಿರ ರುಪಾಯಿ ಸಂಬಳದ ನೌಕರಿಗೆ ಗೋಲಿ ಹೊಡೆದು ಬಂದು ಕುಳಿತಿದ್ದೆ. ಯಥಾಪ್ರಕಾರ unemployment ಎಂಬ ರಿಟೈರ್‌ಮೆಂಟ್ ಇಲ್ಲದ ಹುದ್ದೆ. ಮನಸ್ಸು ಕಳವಳಗೊಂಡಿತ್ತು. ಬೆಂಗಳೂರಿನಲ್ಲಿ ಉಳಿಯಲು ಜಾಗೆಯಿರಲಿಲ್ಲ. ಕೈಯ್ಯಲ್ಲಿ ಹಣವಿರಲಿಲ್ಲ. ಇದ್ದ ಚೂರು ಪಾರು ದುಡ್ಡು ಮುಗಿದು ಹೋಗುವ ಮುನ್ನ ಊರು ಸೇರಿಬಿಡಬೇಕು. ಮನಸ್ಸಿನ ಕಳವಳಗಳು ಶೃತಿ ಮೀರುವ ಮೊದಲೇ ಲಲಿತೆಯ ಸನ್ನಿಧಿ ತಲುಪಿಬಿಡಬೇಕು. ಸರಿ, ಏಳನೇ ಲಾರ್ಜು ಸಾಲ ಹೇಳಿ ಒಂದು gulpಗೇ ಮುಗಿಸಿ ಹುಬ್ಬಳ್ಳಿಯ ಬಸ್ಸು ಹತ್ತಿಬಿಟ್ಟೆ.

ರಾತ್ರಿ ನಾನು ಬೆಂಗಳೂರಿನಲ್ಲಿ ಬಸ್ಸು ಹತ್ತುತ್ತಿದ್ದ ಕ್ಷಣಗಳಲ್ಲೇ, ಅಲ್ಲಿ ಹುಬ್ಬಳ್ಳಿಯ ನನ್ನ ಹೆಂಚಿನ ಮನೆಯಲ್ಲಿ ಭಯಾನಕ ಘಟನೆಯೊಂದು ಸಂಭವಿಸಿರಬಹುದೆಂಬ ಸಣ್ಣ ಗುಮಾನಿಯೂ ನನಗಿರಲಿಲ್ಲ. ಬೆಳಗಿನ ಜಾವ ನಾನು ಮನೆಯ ಬಾಗಿಲು ತಟ್ಟಿದಾಗ ಮನೆಯೊಳಗೆ ದಿಗಿಲು ಹುಟ್ಟಿಸುವಂತಹ ಮೌನವಿತ್ತು. ಯಾವತ್ತೂ ಹಾಗಾಗಿರಲಿಲ್ಲ. ಬಾಗಿಲು ತಟ್ಟುವ ಅವಕಾಶವನ್ನೇ ಕೊಟ್ಟವಳಲ್ಲ ಲಲಿತೆ. ಹೆಜ್ಜೆ ಸಪ್ಪಳವೇ ಸಾಕು. ಮೊದಲ ಮೆಟ್ಟಿಲು ಹತ್ತುವ ಹೊತ್ತಿಗೇ ಎದ್ದು ಬಂದಿರುತ್ತಿದ್ದಳು. ಆದರೆ ಅವತ್ತು ಇಡೀ ಐದು ನಿಮಿಷ!

ಆಕೆ ಬಂದು ವರಾಂಡದ ದೀಪ ಹಾಕಿ ಬಾಗಿಲು ತೆರೆದಾಗ, ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಅಷ್ಟೊಂದು ಭಯದಿಂದ, ಆತಂಕದಿಂದ ಚೀತ್ಕರಿಸಿದ್ದೆ. ಆಕೆಯ ಮುಖ ಒಡೆದು ಹೋಗಿತ್ತು. ಮೇಲಿನ ತುಟಿ ಮೂರು ಭಾಗವಾಗಿತ್ತು. ಆರು ಹಲ್ಲು ಕಿತ್ತು ಹೋಗಿದ್ದವು. ಕುತ್ತಿಗೆ ಸುಟ್ಟು ಹೋಗಿತ್ತು. ನಾನು ಚಿಕ್ಕ ಹುಡುಗನಂತೆ ಅಳತೊಡಗಿದೆ. 'ಮಕ್ಕಳು ಗಾಬರಿಯಾಗ್ತಾರೆ... ಸುಮ್ನಿರು' ಎಂದು ಅತಿ ಕಷ್ಟದಿಂದ ಹೇಳಿ ಒಳಕ್ಕೆ ಕರೆದೊಯ್ದಳು. ಅಡುಗೆ ಮನೆಗೆ ಒಯ್ದು ಕುಕ್ಕರ್ ತೋರಿಸಿದಳು. ಅದು ಹಿಂದಿನ ರಾತ್ರಿ, ಅಲ್ಲಿ ನಾನು ಬಸ್ಸೇರುತ್ತಿದ್ದ ಹೊತ್ತಿನಲ್ಲೇ ಭಯಂಕರವಾಗಿ ಸಿಡಿದು ಬಿಟ್ಟಿತ್ತು. ಅಪಘಾತ, ಹೆಣ, ರಕ್ತಪಾತ, ಸಾವು... ಎಲ್ಲವನ್ನೂ ನೋಡಿದ ಮನುಷ್ಯ. ಸಣ್ಣ ಏಟಿಗೆ ಧೃತಿಗೆಡುವವನಲ್ಲ. ಅಂಥವನು ದಿಕ್ಕು ತೋಚದೆ ಕೂತು ಬಿಟ್ಟಿದ್ದೆ ನೋಡಿ! ನನಗೇ ಅಂಥದೊಂದು ಅಪಘಾತವಾಗಿದ್ದರೂ ನಾನಷ್ಟು ಹೆದರುತ್ತಿರಲಿಲ್ಲ.

ಅವಳ ಮುಖ destroy ಆಗಿ ಹೋಗಿತ್ತು. ಕುಕ್ಕರ್‌ನ ಸ್ಫೋಟ ಎಷ್ಟು ಭಯಾನಕವಾಗಿತ್ತೆಂದರೆ, ನಮ್ಮ ನೆರೆಹೊರೆಯವರು ಓಡಿ ಬಂದು ಮನೆಯಲ್ಲಿ ಬದುಕಿದ್ದವರನ್ನೆಲ್ಲ ಒಮ್ಮೆ ಎಣಿಸಿ confirm ಮಾಡಿಕೊಂಡಿದ್ದರು. ಅಡುಗೆ ಮನೆಯ false roof ಕಿತ್ತು ಹೋಗಿತ್ತು. ನನ್ನ ಲಲಿತೆ ನಿತ್ರಾಣಗೊಂಡು ಕುರ್ಚಿಗೊರಗಿ ಕುಳಿತಿದ್ದರೆ, ಚಿಕ್ಕ ಮಗಳು ಕಂಪಿಸುತ್ತಾ ನಡೆದುದನ್ನೆಲ್ಲ ವಿವರಿಸತೊಡಗಿದ್ದಳು. ಅವಳ ವಿವರಣೆಯೆಲ್ಲ ಮುಗಿದ ಮೇಲೆ ಲಲಿತೆ ಅಂದದ್ದೇನು ಗೊತ್ತೇ?

ತಕ್ಷಣ ಒಂದು ಕವಿತೆ ನೆನಪಾಯಿತು. ಯಾವುದೋ ದೇಶದ ಕವಿತೆಯದು. ಅದರ ಇಂಗ್ಲಿಷ್ ಅನುವಾದ ಓದಿದ್ದೆ. ಆಕೆ ಆರೇಳು ಮಕ್ಕಳ ತಾಯಿ. ಮನೆ ತುಂಬ ಬಡತನ. ಕಷ್ಟಪಟ್ಟು ಮಕ್ಕಳಿಗೆ ಅನ್ನ ಹೊಂಚುವಾಗ ಪರಮ ಕಾರ್ಕೋಟಕ ವಿಷದ ಚೇಳೊಂದು ಆಕೆಯನ್ನು ಕುಟುಕಿಬಿಡುತ್ತದೆ. ಒಂದೇ ನೋವು! ಮಂತ್ರವಾದಿ, ವೈದ್ಯ, ನಾಟಿ ಔಷಧಿಯವನು, ನೆರೆಹೊರೆಯವರು ಎಲ್ಲ ಬರುತ್ತಾರೆ. ಏನೆಲ್ಲ ಮಾಡುತ್ತಾರೆ. ಅಬ್ಬಾ, ಇಡೀ ಪದ್ಯದ ತುಂಬಾ ನೋವಿನದೇ ವರ್ಣನೆ. ಎಷ್ಟೋ ಹೊತ್ತಿನ ನಂತರ ವಿಷವೆಲ್ಲ ಇಳಿದು ನಿರುಮ್ಮಳಗೊಂಡ ಮೇಲೆ ಆಕೆ ಉದ್ಗರಿಸುತ್ತಾಳೆ 'ಸದ್ಯ, ಈ ಚೇಳು ಮಕ್ಕಳಿಗೆ ಕಚ್ಚಲಿಲ್ವಲ್ಲ!''

ಅವತ್ತು ಲಲಿತೆ ಅಂದದ್ದೂ ಅದನ್ನೇ. ಇಡೀ ಮೂವತ್ತ್ನಾಲ್ಕು ವರ್ಷದ ಒಡನಾಟದಲ್ಲಿ ಅನ್ನುತ್ತ ಬಂದಿರುವುದೂ ಅದನ್ನೇ. ಲೆಕ್ಕದ ಪ್ರಕಾರ ಮೂವತ್ತ್ನಾಲ್ಕು ವರ್ಷ. ಆದರೆ ಮೂವತ್ತೆಂಟು ವರ್ಷಗಳಾಗಿ ಹೋದವು. 1975ರ ಜನವರಿ ಮೊದಲ ದಿನ ನನಗವಳ ಪರಿಚಯವಾದದ್ದು. ಆದವಳ birthday ಕೂಡ. 'ಇಡೀ ಜಗತ್ತೇ ಆಚರಿಸುತ್ತಲ್ಲ ಮೇಡಂ?' ಅಂತ ತಮಾಷೆ ಮಾಡಿದ್ದೆ. ಅವಳೇ ನನ್ನ ಜಗತ್ತಾಗುತ್ತಾಳೆ ಅಂದುಕೊಂಡಿರಲಿಲ್ಲ. ನನ್ನ ವೈಫಲ್ಯ, ಸೋಲು, ಹತಾಶೆ, ನಿರಾಶೆ, ಕಳವಳಗಳಿಗೆಲ್ಲ ಸಾಕ್ಷಿಯಾಗಿ ನಿಂತವಳು. ಕಷ್ಟಗಳನ್ನೆಲ್ಲ 'ನಾನಿದ್ದೇನೆ ಅನುಭವಿಸು...' ಅಂದು ಜೊತೆಗೆ ಬಂದು ನಿಂತವಳು. ಎಲ್ಲ ಹೆಂಡತಿಯರೂ ಹಾಗೇನೇ. ಅದರಲ್ಲೇನಿದೆ ಗ್ರೇಟ್‌ನೆಸ್ ಅಂತೀರೇನೋ. ಆದರೆ ಎಲ್ಲ ಗಂಡಂದಿರಂಥವನು ನಾನಾಗಲಿಲ್ಲವಲ್ಲ? ಎಲ್ಲರ ಮದುವೆಯಂತಹುದೂ ಅಲ್ಲ. ಎಲ್ಲರ ಸಂಸಾರದಂತಹುದಂತೂ ಅಲ್ಲವೇ ಅಲ್ಲ. ಅವಳ ತಂದೆ ತಾಯಿ ಮದುವೆ ಮಾತುಕತೆಗೆಂದು ನಮ್ಮ ಮನೆಗೆ ಬಂದ ದಿನ ನನ್ನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದರು! ಮದುವೆಯ ದಿನ ನಾನು ನಯಾ ಪೈಸೆಯ ಕಮಾಯಿ ಇಲ್ಲದ ಪಡ್ಡೆ ಹುಡುಗ. ಅದಕ್ಕೆ ಮುಂಚೆ ಜೊತೆಗೆ ಓಡಾಡುತ್ತಿದ್ದಾಗ 'ಎಲ್ಲಾ ಬಿಟ್ಟು ಗೂಳಿಯಂಥೋನ ಜೊತೆ ಓಡಾಡ್ತೀಯಲ್ಲಮ್ಮಾ?' ಎಂಬ ಮೂದಲಿಕೆ. ಒಂದು ನೌಕರಿಗೆ, ಒಂದು ವೃತ್ತಿಗೆ, ಒಂದು ಮನೆಗೆ, ಒಂದು ಊರಿಗೆ, ಕಡೆಯ ಪಕ್ಷ ಒಂದು ನಿಶ್ಚಿತ ಜೀವನ ವಿಧಾನಕ್ಕೆ ಅಂಟಿಕೊಳ್ಳದ ಈ ಅಲೆಮಾರಿ ಜೋಗಿ ಜಂಗಮನನ್ನು ಕಟ್ಟಿಕೊಂಡು ಹೆಣಗುವ ಸೌಭಾಗ್ಯ ಎಲ್ಲರಿಗೂ ಎಲ್ಲಿಂದ ಬಂದೀತು? ಆಕೆ ಕೆಲಕಾಲ ನನ್ನ ಶಿಕ್ಷಕಿಯಾಗಿದ್ದಳು. ಅದು ಬಹುಶಃ ನಮ್ಮ ಸ್ನೇಹಕ್ಕೊಂದು ನೆಪವಾಗಿತ್ತು. ಆಕೆ ನನಗಿಂತ ಹಿರಿಯಳು. ನನ್ನ ತಾಯಿಗೆ ತುಂಬ ಆತ್ಮೀಯಳಾಗಿದ್ದವಳು. ತುಂಬಿದ ಮನೆಯಲ್ಲಿ ಬೆಳೆದವಳು. ನನಗಾಗಿ ಎಲ್ಲರನ್ನೂ ಎಲ್ಲವನ್ನೂ ಬಿಟ್ಟು ಹೊರಟವಳು.

ಏನು ನಂಬಿಕೊಂಡು ಬಂದಳು?

ಕೇವಲ ಪ್ರೀತಿಯನ್ನ!

ಇವತ್ತು ಉಳಿದಿರುವುದೇನು?

ಕೇವಲ ಪ್ರೀತಿ!

ಅವಳಿಗೆ ನನ್ನ ತಾಯಿ ಮಾಡಿಸಿಟ್ಟ ಬಳೆಗಳೆರಡನ್ನೂ ನಾನು ಮಾರಿ ಕುಡಿದು ಹಾಕಿದೆ. ಇದ್ದ ನೌಕರಿಗಳನ್ನೆಲ್ಲ ಬಿಟ್ಟೆ. ಕೆಲವನ್ನು ಕಳೆದುಕೊಂಡೆ. ಸಂಬಳವಿಲ್ಲದೆ ಮುಖ ಒಣಗಿಸಿಕೊಂಡು ಮನೆಗೆ ಬಂದಾಗಲೂ 'ಶೂನ್ಯದಿಂದ' ಎಂಬಂತೆ ಇದ್ದುದನ್ನೇ ಹೊಂದಿಸಿ ಅಡುಗೆ ಮಾಡಿ ಬಡಿಸಿದಳು ಲಲಿತೆ. ಅನೇಕ ಸಲ ನಮ್ಮ ಐದು ಜನರ ಸಂಸಾರ ಅವಳ ಸಂಬಳದ ಮೇಲೇ ನಡೆದಿದೆ. ಆಗ ಅವಳ ಸಂಬಳ ಎಷ್ಟಿತ್ತು ಅಂತ ಗೊತ್ತಿಲ್ಲ. ಇದ್ದಾಗ ಖರ್ಚು ಮಾಡುತ್ತಾ, ಇಲ್ಲದಾಗ ನನ್ನ ಜೇಬಿನಿಂದ ಕದಿಯುತ್ತಾ, ನಿಮ್ಮ ಜೇಬಿನಲ್ಲಿ ಹಣವೇ ಇರಲಿಲ್ಲ ಎಂದು ವಾದಿಸುತ್ತಾ... ಈ ಜಗತ್ತಿನ ಅತಿ ಜಾಣ ಪಿಕ್‌ಪಾಕೆಟರ್ ಆಕೆ! ಮಕ್ಕಳ ಫೀಸಿಗೂ, ನನ್ನ ಸಿಗರೇಟಿಗೂ, ತಿಂಗಳ ರೇಷನ್ನಿಗೂ ವ್ಯವಸ್ಥೆ ಮಾಡಿ ತನ್ನ ತಾಳಿಸರಕ್ಕೆ ಪಿನ್ನು ಹಾಕಿಕೊಳ್ಳುತ್ತಿದ್ದಳು.

ಬಹುಶಃ ಅವಳಿಗೆ ಇದೆಲ್ಲ ಗೊತ್ತಿತ್ತು. ಇವನಿಗೊಂದು ನೌಕರಿ ನೆಲೆ ಇರುವುದಿಲ್ಲ. ಕುಡಿತ ಇವನನ್ನು ಬಿಟ್ಟು ಕದಲುವುದಿಲ್ಲ. ಸಿಟ್ಟು ಕರಗುವುದಿಲ್ಲ. ಇವನೊಬ್ಬ ಜವಾಬ್ದಾರಿಯುತ ಗಂಡನಾಗಲಾರ.

ಎಲ್ಲವೂ ಗೊತ್ತಿತ್ತು. ಗೊತ್ತಿದ್ದೇ ಆದಳು. ಸಂಜೆಯಾದ ಕೂಡಲೇ ನಾನು ಜುಬ್ಬಾ ಏರಿಸಿಕೊಂಡು ಮೊಬೈಕಿನ ಚಾವಿ ತಿರುವುತ್ತಿದ್ದರೆ, ಮನೆ ಮುಂದಿನ ಜಗುಲಿಯ ಮೇಲೆ ಕುಳಿತು, 'ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು, ನಿಷ್ಠೆಯಿಂದಲೆ ಪೋಪನಲ್ಲಿಗೆ. ಕಟ್ಟಕಡೆಗಿದು ಖಂಡಿತಾ!' ಎಂದು ಬೇಕಂತಲೇ ನನ್ನ ಮಗಳಿಗೆ ಗೋವಿನ ಹಾಡು ಹೇಳಿಕೊಡುತ್ತಿದ್ದಳು. ನಿಷ್ಠೆಯಿಂದ ಹೋಗುತ್ತಿದ್ದುದು ಬಾರ್‌ಗೆ ಅಂತ ಅವಳಿಗೂ, ಅಮ್ಮನಿಗೂ ಚೆನ್ನಾಗಿ ಗೊತ್ತಿತ್ತು. ಅದನ್ನು ತಿದ್ದಲಾಗದ ದೌರ್ಭಾಗ್ಯ ಎಂದು ಒಪ್ಪಿಕೊಂಡಿದ್ದರಿಂದ ಇಬ್ಬರೂ ನಕ್ಕು ಸುಮ್ಮನಾಗಿಬಿಡುತ್ತಿದ್ದರು. ಆದರೆ ಮಾರನೆಯ ದಿನ ಮುಂಜಾನೆ ಅವಳ ಮುಖದಲ್ಲಿ 'ಕುಡುಕನ ಹೆಂಡತಿ' ಅನ್ನಿಸಿಕೊಂಡ ನೋವು, ಅವಮಾನಗಳು ಮಡುವುಗಟ್ಟಿ ನಿಂತಿರುತ್ತಿದ್ದವು. 'Sorry ಅನ್ನುವ ನೈತಿಕ ಸ್ಥೈರ್ಯ ಕೂಡ ನನ್ನಲ್ಲಿರುತ್ತಿರಲಿಲ್ಲ. ಎಷ್ಟೋ ಸಲ ಬೇಕಂತಲೇ ಅವಳು ಶಾಲೆಗೆ ಹೋಗುವ ತನಕ ಏಳದೆ ಬಿದ್ದುಕೊಂಡಿರುತ್ತಿದ್ದೆ. ಒಂದು ದಿನಕ್ಕೂ ನಿಲೆ ಹಾಕಿ 'ಹೀಗೇಕೆ?' ಎಂದು ಕೇಳಲಿಲ್ಲ. ವಾದಿಸಲಿಲ್ಲ. ದಂಡಿಸಲಿಲ್ಲ. ನನ್ನ ಉಪಟಳ ವಿಪರೀತವಾದಾಗ ಕತ್ತಲಲ್ಲಿ ಒಬ್ಬಳೇ ಕುಳಿತು ಕಣ್ಣೀರು ಕೆಡವಿದ್ದು ಬಿಟ್ಟರೆ, ಮತ್ತೊಂದು ಮಾಡಲಿಲ್ಲ.

ಆದರೆ ಇದ್ದಕ್ಕಿದ್ದಂತೆ ಒಂದು ದಿನ ದೈವ ಭಕ್ತಿ ಬೆಳೆಸಿಕೊಂಡು ಬಿಟ್ಟಳು. ಮೊದಲು ಗಣಪತಿಯೊಬ್ಬನೇ ಇದ್ದ. 'ಶನಿ ದೇವರ ಪೂಜೆ ಮಾಡಿ... ಗಂಡನಿಗೆ ಬುದ್ಧಿ ಬರ‍್ತದೆ' ಅಂತ ಯಾರೋ ಹೇಳಿದರಂತೆ, ಶನಿ ಮಹಾರಾಜನ ಫೊಟೋ ಕಾಗೆ ಸಮೇತ ಬಂದು ಮನೆಯಲ್ಲಿ ಸ್ಥಾಪಿತವಾಯಿತು. ನಾನಿರುವಾಗ ಮತ್ತೊಬ್ಬ ಶನಿ ಯಾತಕ್ಕೆ? ಅಂದೆ. ಕೇಳಲಿಲ್ಲ. ಎಳ್ಳೆಣ್ಣೆಯ ದೀಪ ಹಚ್ಚಿ ಬಾಡಿಗೆ ಮನೆಯ ಗೋಡೆಗಳನ್ನು ಕರ್ರಗೆ ಮಾಡಿದಳು. 'ಬುದ್ಧಿ' ಎಂಬುದು ನನಗೂ ಬರಲಿಲ್ಲ. ಶನಿಗೂ ಬರಲಿಲ್ಲ. ಮನೆಯ ಮೂಲೆಯಲ್ಲಿ ನಾನು ತಂದು ಒಟ್ಟುತ್ತಿದ್ದ ಖಾಲಿ ಬಾಟಲುಗಳನ್ನು ಅಸಹ್ಯದಿಂದ, ಅವಮಾನದಿಂದ ಆಚೆಗೆ ಹಾಕುತ್ತಿದ್ದಳು. ಖಾಲಿ ಬಾಟಲಿ ಮಾರಿ ಬಂದ ಹಣವನ್ನು ಎಡಗೈಯಲ್ಲೂ ಮುಟ್ಟುತ್ತಿರಲಿಲ್ಲ. ಸರಿ ಸುಮಾರು 1975ರಿಂದ ಗಂಟುಬಿದ್ದ ಅಭ್ಯಾಸ 1995ನ್ನು ತಲುಪುವ ಹೊತ್ತಿಗೆ ನಮ್ಮ ಮನೆಯ ಪ್ರತಿ ಮೂಲೆಯನ್ನೂ ಘಾಸಿಗೊಳಿಸಿತ್ತು. ಪ್ರತಿ ಗೋಡೆಯನ್ನೂ ಕೆಡವಿ ಹಾಕಿತ್ತು. ಪ್ರೀತಿಯೆಂಬ ವಸ್ತುವೊಂದು ಅಸ್ತಿತ್ವದಲ್ಲಿರದೆ ಹೋಗಿದ್ದರೆ ನಾವೆಲ್ಲ ಏನಾಗಿಬಿಡುತ್ತಿದ್ದೆವೋ?

ಹಾಗಾಗಲಿಲ್ಲ. 1995ರ ಮೇ ಇಪ್ಪತ್ತೆರಡರ ರಾತ್ರಿ ನಾನು ಭೂಗತ ಲೋಕದ ಕೆಲವರೊಂದಿಗೆ ಕಾಕ್ಸ್‌ಟೌನ್‌ನ ಮನೆಯೊಂದರಲ್ಲಿದ್ದೆ. ಬೆಳಗಾದರೆ ಮನೆಯಲ್ಲಿ ಹಬ್ಬ. ನಮ್ಮ ಮದುವೆಯ ಆನಿವರ್ಸರಿ. ದೇವರಲ್ಲಿ ನಂಬುಗೆಯಿಲ್ಲದ ನಾನು ಇಷ್ಟದಿಂದ ಆಚರಿಸಿಕೊಳ್ಳುವ ಹಬ್ಬಗಳೆಂದರೆ ಆನಿವರ್ಸರಿ ಮತ್ತು ನಮ್ಮ ಹುಟ್ಟುಹಬ್ಬಗಳು. ಇಪ್ಪತ್ತೆರಡರ ರಾತ್ರಿ ಕಾಕ್ಸ್‌ಟೌನ್‌ನ ಮನೆಯಲ್ಲಿ ಒಂದು ವಿಲಕ್ಷಣ ಘಟನೆ ನಡೆದಿತ್ತು. ಅದು ನನ್ನ ಜೀವನದ ಬಹುದೊಡ್ಡ ತಿರುವಾದೀತೆನಿಸಿರಲಿಲ್ಲವಾದರೂ ನನ್ನೊಳಗೊಂದು ಹೊಸ ದೀಪ ಹೊತ್ತಿಕೊಂಡಿತ್ತು. ಇಪ್ಪತ್ಮೂರರ ಮುಂಜಾನೆ ದಡಬಡಿಸಿ ಎದ್ದವನೇ ಪದ್ಮನಾಭನಗರದ ಮನೆಗೆ ಓಡಿ ಬಂದೆ. ಬಾಗಿಲಲ್ಲಿ ನಿಂತಿದ್ದಳು. ಕೈಯಲ್ಲಿ ಬಿಡಿಗಾಸಿಲ್ಲದವನು ಆನಿವರ್ಸರಿಗೆ ಗಿಫ್ಟೇನು ತರುತ್ತಾನೆ? ಅವಳಿಗೆ ಗೊತ್ತು. ಯಾವತ್ತೂ ಗಿಫ್ಟು ಕೇಳಿದವಳಲ್ಲ.

ಅವತ್ತು ಮನೆಯೊಳಕ್ಕೆ ಬಂದವನೇ 'ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ' ಅಂದೆ. ಮಕ್ಕಳು ಇಬ್ಬರನ್ನೂ ಕೂಡಿಸಿಕೊಂಡು ಕಾಫಿ ಮಾಡಿಕೊಟ್ಟು, ಮುತ್ತು ಕೊಟ್ಟು ಕಾರ್ಡು ಕೈಗಿರಿಸಿದರು. ನಾನು ಗದ್ಗದಿತನಾಗಿದ್ದೆ. ಎಲ್ಲರನ್ನೂ ಒಂದು ತೆಕ್ಕೆಗೆ ಅವಚಿಕೊಂಡು ಹೇಳಿದೆ, 'ಇವತ್ತು ನಿಜಕ್ಕೂ ಗ್ರೇಟ್ ಡೇ; ನಾನಿನ್ಮೇಲೆ ಕುಡಿಯೋದಿಲ್ಲ. ನನ್ನ ಬದುಕಲ್ಲಿನ್ನು ಆ ಅಧ್ಯಾಯ ಮುಗಿದು ಹೋಯಿತು. ಇವತ್ತಿಗೆ ನಾನು ಕೊಡಬಹುದಾದ ಗಿಫ್ಟು ಇದೊಂದೇ!'

ಲಲಿತೆ ನಗಲಿಲ್ಲ. ಮಾತಾಡಲಿಲ್ಲ. ಥ್ಯಾಂಕ್ಸ್ ಅನ್ನಲಿಲ್ಲ. ನನ್ನ ಬೆನ್ನಿಗೊಂದು ಗುದ್ದಿ ಅಡುಗೆ ಮನೆಗೆ ಎದ್ದು ಹೋದಳು. 'ಕೊಂಚ ಹೊತ್ತಿನ ನಂತರ ಎಳ್ಳೆಣ್ಣೆ ದೀಪದ ವಾಸನೆ ಹರಡಿತ್ತು. ಅವಳ ಕಣ್ಣಂಚಿನಲ್ಲಿ ನೀರು! ಆ ಸಂತಸದ ನೀರು ಇವತ್ತಿಗೂ ಅಲುಗಿಲ್ಲ. ಕುಡಿತ ಬಿಟ್ಟ ಮಾರನೆಯ ದಿನವೇ ಕ್ಲಬ್ಬಿಗೆ ಹೋದೆ. ಆಮೇಲೆ ಪಾರ್ಟಿಗಳನ್ನು ಕೊಟ್ಟಿದ್ದೇನೆ. ಗೆಳೆಯರನ್ನು ಕರೆಕರೆದು ಕುಡಿಸಿದ್ದೇನೆ. ಉಹುಂ... ನಾನು ಮುಟ್ಟಿರಲಿಲ್ಲ. ರವಿಯ will power ದೊಡ್ಡದು ಅಂದ ಗೆಳೆಯರಿದ್ದರು. 'ಯಾಕೇಂದ್ರೆ, ಮೊದಲು wills ಸೇದ್ತಿದ್ದೆ' ಅಂತ ತಮಾಷೆ ಮಾಡಿ ಸುಮ್ಮನಾಗಿದ್ದೇನೆ. ಆನಂತರ ಕುಡಿತ ಮತ್ತೆ ಆರಂಭವಾಯಿತು. ವರ್ಷಗಟ್ಟಲೆ ಕುಡಿದೆ. ಆದರೀಗ ಐದು ತಿಂಗಳಿನಿಂದ ಕುಡಿತವನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ.

ನನಗೆ ಗೊತ್ತು; ನಾನು ಯಾರಿಗಾಗಿಯೋ ಕುಡಿತ ಬಿಡಲಿಲ್ಲ. ನನಗಾಗಿ ಬಿಟ್ಟೆ. ಆದರೆ 'ಕುಡುಕನ ಹೆಂಡತಿ' ಎಂಬ ಅವಮಾನದಿಂದ ಅವಳನ್ನು ಮುಕ್ತನಾಗಿಸಿದೆ. ಗಂಡನಾಗಿ ಮತ್ತೇನನ್ನು ಕೊಡಲಾಗದಿದ್ದರೂ ಅದೊಂದು ನೆಮ್ಮದಿಯನ್ನು ವಾಪಸು ಮಾಡಿದೆನಲ್ಲ?
ಬರೆಯುತ್ತ ಕುಳಿತರೆ ಇದು ಒಂದು ಸಂಚಿಕೆಗೆ ಮುಗಿಯುವ 'ಖಾಸ್‌ಬಾತ್‌' ಅಲ್ಲ. ನಮ್ಮ ಈ ಮೂವತ್ನಾಲ್ಕು ವರ್ಷಗಳ ಬಾಳುವೆಯಲ್ಲಿ ನಡೆದ ಸಾವಿರಾರು ಘಟನೆಗಳ ಪೈಕಿ ಎರಡನ್ನು ಮಾತ್ರ ವಿವರಿಸಿ ಇವತ್ತಿನ ಮಾತು ಮುಗಿಸುತ್ತೇನೆ;

ಅದೊಂದು ಹಂತದಲ್ಲಿ ಹಾಗಾಯಿತು. ಹುಡುಗಿಯೊಬ್ಬಳು ನನ್ನನ್ನು ವಿಪರೀತವಾಗಿ ಹಚ್ಚಿಕೊಂಡು ಬಿಟ್ಟಿದ್ದಳು. ಅದು ಅವಳ ಹದಿ ವಯಸ್ಸಿನ ಅಪ್ಪಟ infatuation. ಅವಳಿಗಿಂತ ಕೊಂಚ ದೊಡ್ಡವನು ನಾನು. ನನಗಿಂತ ದೊಡ್ಡವಳು ಲಲಿತೆ. ಈ ವಿಷಯ ಲಲಿತೆಗೆ ಗೊತ್ತಾಗಲಿಕ್ಕಿಲ್ಲ ಅಂದುಕೊಂಡಿದ್ದೆ. ಗೊತ್ತಾಯಿತು. ಅವಳು ರೇಗುತ್ತಾಳೆ ಅಂದುಕೊಂಡಿದ್ದೆ. ರೇಗಲಿಲ್ಲ. ಸುಮಾರು ಎರಡು ವಾರದ
ನಂತರ ಆ ಹುಡುಗಿಯಿಂದ ನನಗೊಂದು ಪತ್ರ ಬಂದಿತ್ತು; 'ರವೀ, ಸುಡುವ ಸೂರ್ಯನನ್ನು ಹೇಗೆ ಆಕಾಶ ಮಾತ್ರ ಭರಿಸಬಲ್ಲದೋ...
ಹಾಗೆ ನಿನ್ನನ್ನು ಲಲಿತೆ ಮಾತ್ರ ಭರಿಸಬಲ್ಲಳು. Let's not meet again'

ಆಮೇಲೆ ಆ ಹುಡುಗಿ ನನಗೆ ಕಂಡಿಲ್ಲ. ಅವಳ ಬಗ್ಗೆ ನಾವಿಬ್ಬರೂ ಮಾತು ಕೂಡ ಆಡಿಲ್ಲ;

ಎರಡನೆಯ ಘಟನೆ 1979ರಲ್ಲಿ ನಡೆದದ್ದು. ಲಲಿತೆ ನೆತ್ತರ ಮಡುವಿನಲ್ಲಿ ಬಿದ್ದಿದ್ದಳು. ಅವಳನ್ನೆತ್ತಿಕೊಂಡು ಮುಖ ತೊಳೆದು, ತಲೆ ಬಾಚಿ, ಜಡೆ ಹಾಕಿ, ಬೆಚ್ಚಗೊಂದು ಶಾಲು ಹೊದಿಸಿ, ಅಂಗೈಯಲ್ಲಿಟ್ಟುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದೆ. 'ಬದುಕುವುದು ಕಷ್ಟ. ಬದುಕಿದರೂ ಕಷ್ಟ. ನಿಮ್ಮ ಹೆಂಡತಿ ತುಂಬ ತೊಂದರೆಯಲ್ಲಿದ್ದಾರೆ' ಅಂದರು ಡಾಕ್ಟರ್. ಬಳ್ಳಾರಿಯ ಹೆರಿಗೆ ಆಸ್ಪತ್ರೆಯ ಗೋಡೆಗಳಿಗೆ ಗೊತ್ತು ನಾನೆಷ್ಟು ಕನಲಿ ಹೋಗಿದ್ದೆ ಅಂತ. ಅಂದು ಅಲ್ಲಿದ್ದ ಡಾ.ಉಷಾ ರಂಗನ್ ಎಂಬ ದರಿದ್ರ ಹೆಂಗಸು ಲಂಚ ಕೇಳಿದ್ದಳು. ನನ್ನ ಹತ್ತಿರ ಐದು ರುಪಾಯಿ ಕೂಡ ಇರಲಿಲ್ಲ. ನನ್ನ ಅನಾರೋಗ್ಯಗೊಂಡ ಹೆಳವ ತಾಯಿಯನ್ನು ಬಿಟ್ಟರೆ ನನಗ್ಯಾರೂ ಇರಲಿಲ್ಲ. ಲಂಚದ ವಿರುದ್ಧ ಆಕ್ರೋಶ ಹುಟ್ಟಿದ್ದೇ ಅವತ್ತು. ಡಾ. ಉಷಾ ರಂಗನ್‌ಳ ಛೇಂಬರಿನೊಳಕ್ಕೆ ನುಗ್ಗಿ ಅಕ್ಷರಶಃ ಜೀವದ ಬೆದರಿಕೆ ಹಾಕಿದ್ದೆ. ನನ್ನ ಲಲಿತೆಗೆ ಏನಾದರೂ ಆಗಿಬಿಟ್ಟರೆ ನಿನ್ನ ಜೀವ ಉಳಿಸೋದಿಲ್ಲ ಎಂದು ಹೇಳಿದ್ದೆ. ಕ್ರುದ್ಧ ಜ್ವಾಲಾಮುಖಿಯಂತಾಗಿದ್ದೆ. ಹಾಗೆ ಕುದಿಯುತ್ತಲೇ ಬಂದು ಲಲಿತೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡು ಹೇಳಿದೆ 'ನೀನು ನನ್ನನ್ನು ಮದುವೆಯಾಗಬಾರದಿತ್ತು. ಇಂಥ ನಿರ್ಭಾಗ್ಯನನ್ನ!'

ಸುಮ್ಮನೆ ನಕ್ಕಿತ್ತು ಭೂಮಿ ತೂಕದ ಸಹನೆ!

ಇವತ್ತಿಗೂ ನಗುತ್ತದೆ. ನಾನು ನಾಯಿ ಕಡಿದವನಂತೆ ಕಿರಿಚಾಡುವಾಗ, ಕೆಲಸದ ಒತ್ತಡದಲ್ಲಿ ನಲುಗಿ ಹೋದಾಗ, ಬದುಕಿನ ಧಡಕಿಗಳ ನಡುವೆ ಕಳೆದು ಹೋದಾಗ... ಆಗೆಲ್ಲ ನಗುತ್ತಲೇ ಇರುತ್ತದೆ. ದಣಿದು ದಿಕ್ಕೆಟ್ಟು, ಸೋತು ಕಂಗಾಲಾದಾಗ 'ಇಗೋ ಇಲ್ಲಿದ್ದೇನೆ' ಅನ್ನುತ್ತದೆ. ಕೈ ಹಿಡಿದು ಕರೆದುಕೊಳ್ಳುತ್ತದೆ.

ಅವಳು ಬದುಕಿನ ಮೊಟ್ಟ ಮೊದಲ ಮೆಟ್ಟಿಲ ಮೇಲೆ ನಿಂತು ಕೇಳಿದ ಪ್ರಶ್ನೆ;

'ಎಲ್ಲೋ ಜೋಗಪ್ಪ ನಿನ್ನ ಅರಮನೆ!'

ಅದಕ್ಕಿನ್ನು ಉತ್ತರ ಸಿಕ್ಕಿಲ್ಲ.

ಆದರೆ ಅನಂತರದ ದಿನಗಳಲ್ಲಿ ನಾನು ಅವಳ ಕೈಗೆ ದುಡ್ಡು ಕೊಟ್ಟು ಹೇಳಿದೆ;

'ಪಿನ್ನು ಹಾಕಿದ್ದು ಸಾಕು. ತಾಳಿ ಸರ ಮಾಡಿಸಿಕೋ!'

ಈಗ ಹೇಳಿ; ನಿಮ್ಮ ಮನೆಯ ಕಥೆಯೂ ಇದೇನಾ?