ಥೂ... ಕನ್ನಡ ರಾಜ್ಯೋತ್ಸವದ ದಿನಕ್ಕೆ ಇನ್ನೊಂದು ಗಂಟೆ ಬಾಕಿ ಇದೆ. ಕನ್ನಡ, ಕನ್ನಡ ಅಂತ ಕೂಗೋರು, ಮೆಟ್ರೊ ಅಲ್ಲಿ ಕನ್ನಡ ಇಲ್ಲ ಅಂತ ಬೊಗಳೋರು, ಅರಿಶಿಣ, ಕುಂಕುಮ ಕೂಡ ನಾಚುವ ಹಾಗೇ ತಮ್ಮ ಡಿಪಿ ಹಾಕೋಳೋರು... ಥೂ...
ಒಂದು ಒಳ್ಳೆಯ ಪೆನ್ನು ಮತ್ತು ಒಂದು ಪೇಪರ್ ಕೊಟ್ಟರೆ ಸ್ವಚ್ಚ ಕನ್ನಡದಲ್ಲಿ ತಮ್ಮ ಹೆಸರನ್ನು ತಾವೇ ಬರೆಯಲೂ ಕೂಡ ಬಾರದವರೂ ಕೂಡ ಕನ್ನಡ ರಕ್ಷಕರು. ಇವರ ರಕ್ಷಣೆಗೆ ಬೆಂಕಿ ಹಾಕ...
ನಾನು ಹನ್ನೆರಡು ವರ್ಷ ಸಂಸ್ಕೃತ ಮಾಧ್ಯಮದಲ್ಲಿ ಓದಿದವನು.. ಈಗಲೂ ನನಗೆ ನೆನೆಪು ಅಂತ ಇರುವುದು ಕೇವಲ ೧೦% ಸಂಸ್ಕೃತ. ಯಾರೇ ಬರಲಿ, ಕುವೆಂಪುಯಿಂದ ಕಂಬಾರರವರೆಗೆ.. ಯಾರೇ ಬರೆಯಲಿ, ಅ ಯಿಂದ ಜ್ಞ ವರೆಗೆ... ನಾನು ಓದಬಲ್ಲೆ. ಅರ್ಥ ಮಾಡಿಕೊಳ್ಳಬಲ್ಲೆ. ಅಕ್ಷರವೇ ಬರದ ಮೂಢನಿಗೆ ಮತ್ತು ಅವನಿಗೆ ಮಾತ್ರ ಅರ್ಥ ಆಗುವ "ಭಾಷೆ"ಯಲ್ಲಿ ಹೇಳಬಲ್ಲೆ.
ಕನ್ನಡ ಒಂದು ಮಾಯಾವಿ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಬೇರೆ ಬೇರೆ ಕನ್ನಡ ಇದೆ. ಜಿಲ್ಲೆಯ ಪ್ರತಿ ತಾಲೂಕುಗಳಲ್ಲೂ ಬೇರೆ ಬೇರೆ ಕನ್ನಡ ಇದೆ. ಉತ್ತರಪ್ರದೇಶದಲ್ಲಿ ಹುಟ್ಟಿದ, "ಬಿಜೆಪಿ" ಹಾಗೂ "ಮೋದಿ"ಯನ್ನು ಅದ್ಭುತವಾಗಿ ಬಯ್ಯುತ್ತಾನೆ ಅಂತ ರಾಮಚಂದ್ರ ಗುಹಾ ಎನ್ನುವ ಉಲುಕೋಚಿಗೆ, ರಾಜ್ಯೋತ್ಸವ ಪ್ರಶಸ್ತಿ ಕೊಡುವ "ಸಿದ್ಧರಾಮಯ್ಯ"ನ ಭಾಷೆಗಿಂತ ನಮ್ಮ ಕನ್ನಡ ಶುದ್ಧವಾಗಿದೆ.
ಇದು ಈ ಕನ್ನಡದ ತಾಕತ್ತು. ಪ್ರತಿ ನೂರು ಕಿಲೋಮೀಟರುಗೆ "ಇದು ಕನ್ನಡವಾ!!?" ಅಂತ ಕೇಳುವ ರಕ್ಷಕರಿಗೇನು ಗೊತ್ತು ಕನ್ನಡದ ಹಿರಿಮೆ???