ಜುಲೈ ೧ ರ ಆಚೆ, ಈಚೆ ಹದಿನೈದು ದಿನಗಳಾದವು. ಜಿ.ಎಸ್.ಟಿ ಮೇಲಿನ ಜೋಕುಗಳು, ಟ್ರೋಲ್'ಗಳು, ಖುದ್ದು ಮೋದಿ ಬಂದು ಇವರ ಮೈ ಮೇಲೆ ಬರೆ ಎಳೆದಿದಾನೇನೋ ಎಂಬಂತಹ ನಾಟಕಗಳು ಇನ್ನೂ ನಿಂತಿಲ್ಲ. ಜೊತೆಗೆ ತಿಂಡಿ ಊಟದ ಮೇಲೂ ಟ್ಯಾಕ್ಸ್ ಆಹ್.. ಎಂಬಂತಹ ವೀಡಿಯೊಗಳು..
ಈ ಮುಂಚೆ ಇದ್ದ ಎಲ್ಲಾ ತೆರಿಗೆ ನಿಯಮಗಳು ಇವರಿಗೆ ಗೊತ್ತಿತ್ತಾ.. ಇಲ್ಲ. ಆದರೂ ಇವರ ತೆವಲು ಇನ್ನೂ ನಿಂತಿಲ್ಲ.
ಹೌದು ಸ್ವಾಮಿ, ಪಂಚರ್ ಹಾಕುವ ಒಬ್ಬ ವ್ಯಕ್ತಿ ಎಂ.ಟಿ.ಆರ್ ಅಲ್ಲೋ, ಮಯ್ಯಾಸ್ ಅಲ್ಲೋ ₹65 ಕೊಟ್ಟು ದೋಸೆ ತಿಂದರೆ ಟ್ಯಾಕ್ಸ್ ಕಟ್ಟಬೇಕು.
ಯಾಕೆ ಅಂತಹ ವ್ಯಕ್ತಿ ದೋಸೆ ತಿನ್ನಬಾರದಾ ಎಂಬ ಶುದ್ಧ ತರಲೆ ಪ್ರಶ್ನೆ ಕೇಳಬೇಡಿ. ಅವನೇನು ಪ್ರತಿದಿನವೂ ತಿನ್ನಲ್ಲ. ಯಾರಾದರೂ ದುಡ್ಡು ಕೊಟ್ಟು ಹಿಂಗೆ ಮಾಡು ಅಂತ ಹೇಳಿದಾಗ ಮಾತ್ರ ಹಾಗೇ ಮಾಡಬಲ್ಲ.
ಏಕ ರೂಪ ತೆರಿಗೆ ಅನ್ನೋದೇ ಒಂದು ಸಿಂಪಲ್ ಆಗಿರೋ ಕಾನ್ಸೆಪ್ಟ್. ಅದರಲ್ಲಿ ಸುಮಾರು ಲಕ್ಷದಷ್ಟು ವಸ್ತುಗಳ, ಸೇವೆಗಳ ತೆರಿಗೆ ನೀತಿ ಇದೆ. ನೂರಾರು ಆರ್ಥಿಕ ತಜ್ಞರು, ಸಾವಿರಾರು ಗಂಟೆಗಳ ಮೀಟಿಂಗ್ ಮಾಡಿ, ಎಲ್ಲವನ್ನೂ ತುಂಬ ಕಷ್ಟಪಟ್ಟು, ಕಾಳಜಿಯಿಂದ ತಯಾರಿಸಿದ್ದಾರೆ. ಅದನ್ನೂ ಅಪಹಾಸ್ಯ ಮಾಡುವುದು ಅಕ್ಷರಶಃ ತಪ್ಪು.
ಇದೇ ಸರಕಾರ ಮುಂಚೆ ೦.೫% ಕೃಷಿ ಕಲ್ಯಾಣ ಸೆಸ್ ಹಾಕಿದಾಗ ಸುಮ್ಮನೇ ಕೂರದೆ ಅಪಹಾಸ್ಯ ಮಾಡಿದವರು, ಇನ್ನು ಏಕ ರೂಪ ತೆರಿಗೆಗೆ ಸುಮ್ಮನಿರುತ್ತಾರೇಯೇ!??