Friday, May 31, 2013

ಕಾಂಗ್ರೆಸ್ ಮಾಡೋ ಒಂದು ಕೆಲ್ಸಕ್ಕಾದ್ರೂ "ಜೈ" ಅನ್ನೋಣ!

ಕೆಲವರಿಗೆ ಬೆಳೆಗ್ಗೆ ಎದ್ರೆ ಅಡಿಕೆ ಬೇಕು, ಚಹಾ ಕುಡಿದ್ ಮೇಲೆ ಅಡಿಕೆ ಬೇಕು, ಹರಟೆ ಹೊಡೆಯುವಾಗ ಅಡಿಕೆ ಬೇಕು, ಹೀಗೆ, ಮದುವೆ, ಮುಂಜಿ, ಗೃಹ ಪ್ರವೇಶ, ನಾಮಕರಣ ಇಂಥ ಎಲ್ಲ ಕಾರ್ಯಕ್ರಮಕ್ಕೂ ಊಟ ಆದ್ ಮೇಲೆ ಅಡಿಕೆ ಬೇಕೇ ಬೇಕು! ಅಷ್ಟೆ ಯಾಕೆ, ಎಲ್ಲರ ಮನೆಯಲ್ಲೂ ಫ್ರಿಜ್ ಮೇಲೆ ಒಂದು ಅಡಿಕೆ ಡಬ್ಬಿ ಇರಲೇಬೇಕು!


.

ಮೇಲೆ ಕೊಟ್ಟಿರೋ ಎಲ್ಲ ಉದಾಹರಣೆಗಳಲ್ಲಿ ಎಲ್ಲೂ ನಾವು "ಗುಟ್ಕಾ" ಉಪಯೋಗ ಮಾಡಲ್ವಲ್ಲಾ, ಅದು ಹೇಗೆ ಅಡಿಕೆ ಬೆಳೆಗಾರರಿಗೆ ನಷ್ಟ ಆಗುತ್ತೆ?!

.

ಕಾಂಗ್ರೆಸ್ ಮಾಡೋ ಒಂದು ಕೆಲ್ಸಕ್ಕಾದ್ರೂ "ಜೈ" ಅನ್ನೋಣ....!!!

Thursday, May 16, 2013

ಹೀಗಿದೆ ನೀವು ಓಟು ಹಾಕಿರುವ ಸರಕಾರ!



ಸಾರಾಯಿಯನ್ನು ಮತ್ತೆ ಜಾರಿಗೆ ತರಲು ಕಾಂಗ್ರೆಸ್ ಸರಕಾರ ಚಿಂತನೆ...!
.
ಏನು ಮಾಡಲು ಹೊರಟಿದ್ದಾರೆ ಈ ಸಿಧ್ಧರಾಮಯ್ಯನವರು?
.
ಬಡವರಿಗೆ ಉತ್ತಮ ಮದ್ಯ ಖರೀದಿಸಲು ಆಗುತ್ತಿಲ್ಲ, ಅದಕ್ಕಾಗಿ, ಅವರ ಶ್ರೇಯೋಭಿವ್ರುಧ್ಧಿಗಾಗಿ ನಾವು ಸಾರಾಯಿಯನ್ನು ಮತ್ತೆ ಜಾರಿಗೆ ತರುತ್ತಿದ್ದೇವೆ...!
ಆದರೆ ಈ ಘೋಷಣೆಗೆ ಸಿಧ್ಧರಾಮಯ್ಯ ಅವರು ಕೊಡುವ ಸಬೂಬೇ ಬೇರೆ. ಉತ್ತಮ ಗುಣದ ಮದ್ಯಕ್ಕೆ ಬೆಲೆ ಜಾಸ್ತಿ, ಬರಿ ಹತ್ತು ರೂಪಾಯಿಯಲ್ಲಿ ಸ್ಥಳೀಯ ಕಳ್ಳರು ತಯಾರಿಸಿದ ಸಾರಾಯಿಯನ್ನು ಕುಡಿದು ತಮ್ಮ ಹಣವನ್ನು ಉಳಿತಾಯ ಮಾಡಿಕೊಳ್ಳಲಿ ಎಂದಿದ್ದಾರೆ..
.
ನೆನೆಪಿರಲಿ ಸ್ನೇಹಿತರೆ... ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಸಾರಾಯಿಗೆ ನಿಷೇಧ ಹೇರಿತ್ತು, ಅದಕ್ಕೆ ಪೂರಕವೆಂಬಂತೆ "ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್" ಹೆಸರಿನಲ್ಲಿ ಸರಕಾರಿ ಪ್ರಾಯೋಜಿತ ಮದ್ಯದ ಅಂಗಡಿಗಳನ್ನು ತೆರೆದು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ, ಪರವಾನಿಗೆ ಹೊಂದಿದ ಮದ್ಯಗಳನ್ನು ಮಾರುತ್ತಿತ್ತು...
.
ಅಗ್ಗದ ಬೆಲೆಯ ಸಾರಾಯಿ ಕುಡಿದರೆ ಹಣ ಉಳಿತಾಯವಾಗುತ್ತೋ ಅಥವಾ ಆರೋಗ್ಯ ಹಾಳಾಗುತ್ತೋ ಆ ಕವಿರತ್ನ ಕಾಳಿದಾಸನೇ ಬಲ್ಲ...
.
ಬಿ.ಜೆ.ಪಿ ಸರಕಾರವಿರುವ ದೂರದ ಗುಜರಾತ್ ನಲ್ಲಿ ಮದ್ಯಪಾನವೇ ನಿಷೇಧವಿರುವಾಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ಸ್ ಸರಕಾರದ ನಿಷೇದ ಮಾಡಿದರುವುದನ್ನೇಲ್ಲಾ ರದ್ದು ಮಾಡುತ್ತಿದೆ..!
.
ಒಂದು ವೇಳೆ ಸಾರಾಯಿಯನ್ನು ಮತ್ತೇ ಜಾರಿಗೆ ತಂದದ್ದೇ ಆದರೆ ಕರ್ನಾಟಕದ ಎಲ್ಲ ಮಹಿಳ ಮಣಿಗಳ ಆಕ್ರೋಶಕ್ಕೆ ಮಾನ್ಯ ಮುಖ್ಯಮಂತ್ರಿಗಳು ಬಲಿಯಾಗಬೇಕಾಗಬಹುದು...
.
ಇಂದು ಸಾರಾಯಿ ನಿಷೇಧ ರದ್ದು, ನಾಳೆ ಲಾಟರಿ ಉದ್ಯಮ ಮತ್ತೆ ಪುನರಾರಂಭದ ಸೂಚನೆ, ನಾಡಿದ್ದು ಗೋಹತ್ಯೆ ನಿಷೇಧಕ್ಕೆ ತಿದ್ದುಪಡಿ ತರುವುದು, ಮುಂದಿನ ದಿನಗಳಲ್ಲಿ ಮುಕ್ತ ವೈಶ್ಯವಾಟಿಕೆಗೆ ಚಾಲನೆ...
.
ಈ ಎಲ್ಲ ಅದ್ಭುತ ದೃಶ್ಯಾವಳಿಗಳನ್ನು ನಾವು ಬರುವ ಐದು ವರ್ಷಗಳ ಕಾಂಗ್ರೆಸ್ ಅಧಿಕಾರದಲ್ಲಿ ತಪ್ಪದೇ ನೋಡಬಹುದು...
.
ನಾನಂತು ಈ ಸರಕಾರಕ್ಕೆ ನನ್ನ ಓಟು ನೀಡಿಲ್ಲ, ಓಟು ಹಾಕಿದ್ದವರಿಗೆ ಅಪರಾಧ ಮನೋಭಾವ ಕಾಡಿರಲಿಕ್ಕೆ ಸಾಕು..